ಕನ್ನಡ ಸಾಹಿತ್ಯ ಪರಿಷತ್ ನ  ಮೈಸೂರು ನಗರ ಅಧ್ಯಕ್ಷರಾಗಿ ಕೆ. ಎಸ್. ಶಿವರಾಮು ನೇಮಕ. 

ಮೈಸೂರು,ಅಕ್ಟೋಬರ್,13,2022(www.justkannada.in): ಕನ್ನಡ ಸಾಹಿತ್ಯ ಪರಿಷತ್ ನ ಮೈಸೂರು ನಗರ ಘಟಕಗ ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ಕೆ. ಎಸ್ ಶಿವರಾಮು ಅವರನ್ನ ನೇಮಕ ಮಾಡಲಾಗಿದೆ.

ನಾಡು-ನುಡಿ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಕೆ. ಎಸ್ ಶಿವರಾಮು ಅವರು ಮಡೆಸ್ನಾನದಂತಹ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿ ರಾಷ್ಟಮಟ್ಟದಲ್ಲಿ ಗಮನ ಸೆಳೆದು ಆ ಅಚರಣೆಯ ನಿಷೇಧಕ್ಕೆ ಕಾರಣರಾಗಿದ್ದರು.

ಇದೀಗ ಇವರನ್ನ ಕನ್ನಡ ಸಾಹಿತ್ಯ ಪರಿಷತ್ ನ ಮೈಸೂರು ನಗರ ಘಟಕಗ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.   ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಅವರು ನೇಮಕಾತಿ ಆದೇಶ ಪತ್ರವನ್ನು ನೀಡಿದರು.

ಈ ವೇಳೆ ಹಿರಿಯ ಸಾಹಿತಿಗಳಾದ ಪ್ರೊ. ಸಿ. ಪಿ. ಕೆ ಹಾಗೂ ಪ್ರೊ. ವೆಂಕಟಚಲಶಾಸ್ತ್ರಿ ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷರಾದ ವೈ. ಡಿ ರಾಜಣ್ಣ. ಎಂ. ಚಂದ್ರಶೇಖರ್. ಡಾ. ಸಿ. ವೆಂಕಟೇಶ್. ರವರು  ಉಪಸ್ಥಿತರಿದ್ದರು.

Key words: Kannada Sahitya Parishad- Mysore- City- President- K. S. Shivaram -appointed