“ಕನಕರನ್ನು ದಾಸ ಅಂತ ಬಳಸುವುದು ತಪ್ಪು” : ಪ್ರೊ.ಅರವಿಂದ ಮಾಲಗತ್ತಿ

kannada t-shirts

ಮೈಸೂರು,ಜನವರಿ,17,2021(www.justkananda.in) : ದಾಸ ಅಂದರೆ ಸೇವಕ, ಗುಲಾಮ ಎನ್ನುವ ಅರ್ಥವಿದೆ. ಕನಕರು ತಮ್ಮನ್ನು ಹರಿಯ ದಾಸ ಅಂತ ಅಂದುಕೊಂಡಿರಬಹುದು.  ಆದರೆ, ನಾವು ಅ‌ವರಿಗೆ ದಾಸ ಅಂತ ಬಳಸುವುದು ಅಪಮಾನ ಮಾಡಿದಂತೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯವ್ಯಕ್ತಪಡಿಸಿದರು.jk-logo-justkannada-mysoreಮೈಸೂರು ವಿವಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ “ಕನಕದಾಸರ 533ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ದೀಪ ಬೆಳಗುವ ಮೂಲಕ  ಚಾಲನೆ ನೀಡಿದರು.

ಈ ಸಂದರ್ಭ ಪ್ರೊ.ಆರವಿಂದ ಮಾಲಗತ್ತಿ ಅವರು ಮಾತನಾಡಿ, ದಾಸತ್ವವ ಮೀರಿದ ವ್ಯಕ್ತಿತ್ವ ಕನಕರಿಗೆ ಇದೆ. ತಿಮ್ಮಪ್ಪ ಕನಕನಾಗಿ, ಕನಕ ದಾಸರಾಗಿ, ತ್ರಿವಿಕ್ರಮ ದಾಸನಾಗಿ ಬದಲಾಗಿದ್ದಾರೆ. ಕನಕರು ದಾಸ ಎನ್ನುವ ಪದದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಕೂಳ ದಾಸ, ಮೂಳ ದಾಸ, ಮಾದಿಗ ದಾಸ, ಹೊಲೆಯ ದಾಸ ಅಂತ ಕೀರ್ತನೆಗಳಲ್ಲಿ ಬರೆದಿದ್ದಾರೆ ಎಂದು ಹೇಳಿದರು.

ನಿಂದಿಸುವ ಪದಗಳನ್ನು ಸ್ವಾಭಿಮಾನದ ಪದಗಳಾಗಿ ಕಾವ್ಯದಲ್ಲಿ ಬಳಸುತ್ತಿದ್ದರು ಅನ್ನಿಸುತ್ತೆ. ದಾಸ ಅನ್ನುವ ಪದ ಬಳಕೆ ಸಮರ್ಥನೀಯ ಅಲ್ಲ ಅನ್ನಿಸುತ್ತೆ. ಕನಕದಾಸರನ್ನು ದಾಸ ಅಂತ ಕರೆಯುವುದು ಬೇಡ. ಕನಕವ್ಯಾಸರು ಅಂತ ಬಳಸಿದರೆ ಸೂಕ್ತ ಅನ್ನಿಸುತ್ತೆ. ವ್ಯಾಸ ಅಂದರೆ ವಿಸ್ತೃತವಾದದ್ದು ಅಂತ ಅರ್ಥ. ಅದಾಗ್ಯೂ ಕನಕವ್ಯಾಸ ಅಂತ ಬಳಸುವುದು ಸರಿಯಲ್ಲ ಅನ್ನಿಸಿದರೆ ಕನಕರು ಅಂತ ಸಂಬೋಧಿಸಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಸಿದ್ದರಾಮಯ್ಯರಿಗೆ ಗಂಡೇದೆಯ ಗುಂಡಿಗೆ ಇದೆ

ಸಿದ್ದರಾಮಯ್ಯರಿಗೆ ಗಂಡೇದೆಯ ಗುಂಡಿಗೆ ಇದೆ. ನಾನು ಬೇಕಾದರೆ ಗೋಮಾಂಸ ತಿನ್ನುತ್ತೇನೆ ಎನ್ನುವ ಧೈರ್ಯ ಎಲ್ಲರಿಗೂ ಬರುವುದಿಲ್ಲ. ಕನಕದಾಸರ ಕೀರ್ತನೆಯೊಂದರಲ್ಲಿ ಕೃಷ್ಣ ಹಸುವನ್ನ‌ ಕೊಂದ, ಕರುವನ್ನು ಕೊಂದ ಅನ್ನೋ ಮಾತಿದೆ. ರಾಕ್ಷಸನೊಬ್ಬ ಹಸುವಿನ ರೂಪದಲ್ಲಿ ಬಂದಿದ್ದಕ್ಕೆ ಕೃಷ್ಣ ಹಸುವನ್ನ ಕೊಂದಿದ್ದಾನೆ ಅಂತ ಬರೆದಿದ್ದಾರೆ. ಆದರೆ, ಅವರ ಕೀರ್ತನೆಯಲ್ಲಿ ಕಾರಣ ಕೊಟ್ಟಿಲ್ಲ ಎಂದರು.

ಹಸುವಿನಲ್ಲಿ ದೇವರಿದೆ ಎಂದು ಹೇಳುತ್ತಾರೆ. ಹಾಗಿದ್ದಲ್ಲಿ, ಹಸುವಿನ ರೂಪದಲ್ಲಿ ರಾಕ್ಷಸ ಬರಲು ಸಾಧ್ಯವೇ?, ಹಾಗೇ ಬಂದಿದ್ದರೆ ಆ ಹಸುವನ್ನು ಯಾಕೆ ಕೃಷ್ಣ ಕೊಲ್ಲಬೇಕಿತ್ತು. ಈ ಪ್ರಶ್ನೆ ನಮಗೆ ಯಾವಾಗಲೂ ಕಾಡುತ್ತೆ. ಹಾಗಾಗಿ, ಸಿದ್ದರಾಮಯ್ಯನವರ ಹೇಳಿಕೆ ನನಗೆ ಗಂಡೇದೆಯ ಹೇಳಿಕೆ ಅಂತ ಅನ್ನಿಸುತ್ತಿದೆ ಎಂದು ಹೇಳಿದರು.

kanaka,use,dasa,False,Wrong,Prof.Arvind Malgathi

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಹಂಪಿ ವಿವಿ ವಿಶ್ರಾಂತ ಕುಲಪತಿ ಮಲ್ಲಿಕಾಘಂಟಿ ಇತರರು ಉಪಸ್ಥಿತರಿದ್ದರು.

key words : kanaka-use-dasa-False-Wrong-Prof.Arvind Malgathi

website developers in mysore