ಭಕ್ತ ಕನಕದಾಸರ 533 ನೇ ಜಯಂತೋತ್ಸವ: ಕುರುಬ ಸಂಪ್ರದಾಯದಂತೆ ಕಂಬಳಿ ಹೊದಿಸಿ ಸಿಎಂ ಬಿಎಸ್ ವೈಗೆ ಸನ್ಮಾನ

ಬೆಂಗಳೂರು,ಡಿಸೆಂಬರ್,3,2020(www.justkannada.in): ಸಂತ, ಕವಿ, ದಾರ್ಶನಿಕ, ದಾಸಶ್ರೇಷ್ಟ, ಭಕ್ತ ಕನಕದಾಸರ 533 ನೇ ಜಯಂತೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕನಕಶ್ರೀ, ಕನಕ ಗೌರವ, ಕನಕ ಯುವ ಪುರಸ್ಕಾರ ಪ್ರದಾನ ಸಮಾರಂಭವನ್ನು  ಮುಖ್ಯಮಂತ್ರಿ   ಬಿ.ಎ.ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.kanaka jayanthi- Ravindra Kalakshetra-cm bs yeddyurappa- honor- Kanka Youth Award.

ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ ಬ್ರಿಜ್ ಶಾಖಾಮಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ  ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.kanaka jayanthi- Ravindra Kalakshetra-cm bs yeddyurappa- honor- Kanka Youth Award.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ  ಗೋವಿಂದ ಕಾರಜೋಳ,  ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಇದೇ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕುರುಬ ಸಂಪ್ರದಾಯದಂತೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

Key words: kanaka jayanthi- Ravindra Kalakshetra-cm bs yeddyurappa- honor- Kanka Youth Award.