ಗೆದ್ದ ‘ಕಾಳಿದಾಸ ಮೇಷ್ಟ್ರು’ ಖುಷಿಪಟ್ಟ ಚಿತ್ರ ತಂಡ !

ಬೆಂಗಳೂರು, ಡಿಸೆಂಬರ್ 20, 2019 (www.justkannada.in): ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಕಂಡಿದೆ. ನಿರ್ದೇಶಕ ಕವಿರಾಜ್, ನಾಯಕ ಜಗ್ಗೇಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಖುಷಿಯಾಗಿದೆ.

ಕವಿರಾಜ್, ನಾಯಕಿ ಮೇಘನಾ ಗಾಂವಕರ್, ವಿತರಕ ದೀಪಕ್ ಹಾಜರಿದ್ದು ಚಿತ್ರ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿದರು. ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕ ಎನಿಸಿದೆ. ಸಿನಿಮಾ ರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ.

ಇನ್ನು ಸಾಕು ಅಂದುಕೊಂಡಿದ್ದಾ. ಆದರೆ, ಕವಿರಾಜ ನೀವು ಸುಮ್ಮನೆ ನಿಲ್ಲಬಾರದು ಸರ್ ಅಂತ ನನ್ನನ್ನು ಕರೆದು, ಪಾಠ ಮಾಡೋಕೆ ಹೇಳಿದರು. ಎಲ್ಲರೂ ಪಾಠ ಕೇಳಿ ಚಪ್ಪಾಳೆ ತಟ್ಟಿದ್ದಾರೆ ಎಂದು ಜಗ್ಗೇಶ್ ಹೇಳಿದರು.