ವಿನಯಪೂರ್ವಕವಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ತಿರಸ್ಕರಿಸಿದ ಪತ್ರಕರ್ತ ಎಂ.ಗೋವಿಂದೇಗೌಡ.

kannada t-shirts

ಮೈಸೂರು,ಫೆಬ್ರವರಿ,11,2023(www.justkannada.in):  ಮೈಸೂರು ಮಿತ್ರ ಸಂಪಾದಕ ಎಂ. ಗೋವಿಂದೇಗೌಡ ಅವರು ತಮಗೆ ಒಲಿದಿದ್ದ 2021ನೇ ಸಾಲಿನ  ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನ ವಿನಯಪೂರ್ವಕವಾಗಿ ತಿರಸ್ಕರಿಸಿದ್ದಾರೆ.

ಈ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ  ಶೆಣೈ ಅವರಿಗೆ ಪತ್ರ ಬರೆದಿರುವ ಪತ್ರಕರ್ತ ಎಂ.ಗೋವಿಂದೇಗೌಡ, 2021ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ನನ್ನನ್ನ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಆದರೆ ನನಗಿಂತಲೂ ಹಿರಿಯರು, ಅನುಭವಿಗಳು ಹಾಗೂ ಸೇವೆಯಲ್ಲಿ ಶ್ರೇಷ್ಠತೆ ಮೆರೆದವರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಈ ಪ್ರಶಸ್ತಿ ಸಲ್ಲುವುದು ಸೂಕ್ತವೆಂದು ಭಾವಿಸುತ್ತೇನೆ. ಹಾಗೆಯೇ ಪ್ರಶಸ್ತಿಯನ್ನ ಸ್ವೀಕರಿಸಲು ನಾನು ಬಯಸುವುದಿಲ್ಲ ಎಂದು  ವಿನಯಪೂರ್ವಕವಾಗಿ ತಮ್ಮ  ಅವಗಾಹನೆಗೆ ತರಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೆ ಸಾಧನೆಗೈದ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿತ್ತು.

Key words: Journalist -M. Govindegowda -politely -rejected – Media Academy Award.

website developers in mysore