“ನಮ್ಮಲ್ಲಿ ಅಸೂಯೆ ಪಡೋರು, ಕಾಲು ಎಳೆಯೋರು ಹೆಚ್ಚು” : ಮಾಜಿ ಸಿಎಂ ಸಿದ್ದರಾಮಯ್ಯ

kannada t-shirts

ಬೆಂಗಳೂರು,ಮಾರ್ಚ್,21,2021(www.justkannada.in) : ನಮ್ಮಲ್ಲಿ ಅಸೂಯೆ ಪಡೋರು, ಕಾಲು ಎಳೆಯೋರು ಹೆಚ್ಚು. ಯಾರೂ ಯಾರನ್ನೂ ದ್ವೇಷ ಮಾಡಬಾರದು. ಹಣ ಮಾಡಲು ಪಕ್ಷಗಳಿಗೆ ಸೇರೋದಲ್ಲ. ಜನರ ಸೇವೆ ಮಾಡುವುದಕ್ಕೆ ರಾಜಕೀಯಕ್ಕೆ ಬರುತ್ತೇವೆ, ಯಾರೇ ರಾಜಕೀಯಕ್ಕೆ ಬರಬೇಕಾದರೂ ಸ್ಪಷ್ಟತೆ ಇರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

jkಕೆಲವರು ತಪ್ಪು ಮಾಡಿದರೂ, ಭ್ರಷ್ಟಾಚಾರ ಮಾಡಿದರೂ, ಜೈಲಿಗೆ ಹೋದರೂ ಸುಲಭವಾಗಿ ಮರೆತು ಹೋಗುತ್ತಾರೆ. ನಮ್ಮ ಜನರು ಕೂಡ ಹಾಗೇ ಇದ್ದಾರೆ. ಈಗ ಭ್ರಷ್ಟಚಾರ ಗಂಭೀರವಾದ ವಿಷಯವಲ್ಲದಂತಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

supporter- KC Balaramu- death-former cm- siddaramaiah-mysore
ಕೃಪೆ-internet

ಪ್ರಜಾಪ್ರಭುತ್ವದಲ್ಲಿ ರಾಜಕೀಯಕ್ಕೆ ಬರಲು ಎಲ್ಲರಿಗೂ ಅವಕಾಶವಿದೆ. ರಾಜಕೀಯದಲ್ಲಿ ಹೆಚ್ಚು ದಿನ ಉಳೀಬೇಕಾದರೆ ಬದ್ಧತೆ ಬೇಕು. ನಾಯಕನಾಗಿ ಬೆಳೆಯಲು ಎಲ್ಲರಿಗೂ ಕೂಡ ಅವಕಾಶ ಇದೆ. ಕೆಲವರಿಗೆ ಸಿಗಬಹುದು, ಕೆಲವರಗೆ ಸಿಗದೇ ಇರಬಹುದು. ಬಂದ ಅವಕಾಶ ಬಳಸಿಕೊಂಡಾಗ ನಾಯಕನಾಗಲು ಸಾಧ್ಯ ಎಂದು ತಿಳಿಸಿದ್ದಾರೆ.

key words : jealous-ourselves-More-foot-dragger-Former CM-Siddaramaiah

website developers in mysore