ಜೆಡಿಎಸ್ ಬಲಪಡಿಸಲು ರಾಜ್ಯಾದ್ಯಂತ ದಳಪತಿಗಳ ಪಾದಯಾತ್ರೆ ಪ್ಲಾನ್: ಫೀಲ್ಡಿಗಿಳಿದ ಹೆಚ್ ಡಿ ದೇವೇಗೌಡರು

ಬೆಂಗಳೂರು:ಜೂ-29:(www.justkannada.in) ಲೋಕಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಜೆಡಿಎಸ್ ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದು, ಸ್ವತ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಫೀಲ್ಡಿಗಿಳಿದಿದ್ದಾರೆ.

ದಳಿಪತಿಗಳು ರಾಜ್ಯಾಧ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಶೀಘ್ರವೇ ಹೆಚ್ ಡಿ ದೇವೇಗೌಡರು ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಲೋಕಸಭಾ ಚುನಾವಣಾ ಸೋಲಿನ ಕುರಿತು ನಡೆದ ಪರಾಮರ್ಶೆ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಪ್ರಸ್ತಾಗಳು ಬಂದಿದ್ದು, ಈ ನಿಟ್ಟಿನಲ್ಲಿ ಪಾದಯಾತ್ರೆ ಮೂಲಕ ಜನರನ್ನು ತಲುಪಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪಕ್ಷ ಸಂಘಟನೆ ಮಾಡುವುದು ಮುಖ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಎರಡು ಹಂತಗಳಲ್ಲಿ ಜೆಡಿಎಸ್ ಪಾದಯಾತ್ರೆ ನಡೆಸಲು ಚಿಂತನೆಗಳು ನಡೆದಿದ್ದು, ಒಂದು ಬೆಂಗಳೂರಿನಿಂದ ಹರಿಹರ ಭಾಗವಾಗಿ ಇನ್ನೊಂದು ಮೈಸೂರು ಭಾಗ ಸೇರಿದಂತೆ ಉತ್ತರ ಕರ್ನಾಟಕಭಾಗವಾಗಿ ಪಾದಯಾತ್ರೆ ಕೈಗೊಳ್ಳಲು ಜೆಡಿಎಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಜೆಡಿಎಸ್ ಬಲಪಡಿಸುವ ಮೂಲಕ ಹೆಚ್ ಡಿ ದೇವೇಗೌಡರು ಮಂಧ್ಯಂತರ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದಾರೆಯೇ? ಎಂಬ ಚರ್ಚೆ ಆರಂಭವಾಗಿದೆ.

ಜೆಡಿಎಸ್ ಬಲಪಡಿಸಲು ರಾಜ್ಯಾದ್ಯಂತ ದಳಪತಿಗಳ ಪಾದಯಾತ್ರೆ ಪ್ಲಾನ್: ಫೀಲ್ಡಿಗಿಳಿದ ಹೆಚ್ ಡಿ ದೇವೇಗೌಡರು
JDS,Padayatre,H D Deve gowda