‘ಮರಳಿ ಮನೆಗೆ ಬನ್ನಿ’- ಶಾಸಕ ಉಮೇಶ್ ಕತ್ತಿ ಭೇಟಿಯಾಗಿ ಆಹ್ವಾನ ನೀಡಿದ ಜೆಡಿಎಸ್ ಎಂಎಲ್ ಸಿ ಬಸವರಾಜ್ ಹೊರಟ್ಟಿ

kannada t-shirts

ಬೆಂಗಳೂರು,ಆ,21,2019(www.justkannada.in): ಸಿಎಂ  ಬಿ.ಎಸ್. ಯಡಿಯುರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ  ಅಸಮಾಧಾನ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿರುವ ಶಾಸಕ ಉಮೇಶ್ ಕತ್ತಿ ಅವರನ್ನ ಜೆಡಿಎಸ್ ಗೆ ಬರುವಂತೆ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಹ್ವಾನಿಸಿದ್ದಾರೆ.

ಇಂದು ಶಾಸಕರ ಭವನದಲ್ಲಿ ಶಾಸಕ ಉಮೇಶ್ ಕತ್ತಿ ಅವರನ್ನ ಜೆಡಿಎಸ್ ಎಂಎಲ್ ಸಿ ಬಸವರಾಜ್ ಹೊರಟ್ಟಿ ಭೇಟಿಯಾಗಿ ಚರ್ಚೆ ನಡೆಸಿದರು.  ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಬಸವರಾಜ್ ಹೊರಟ್ಟಿ, ಮರಳಿ ಮನೆಗೆ ಬನ್ನಿ ಎಂದು ಬಹಳ ದಿನಗಳಿಂದ ಹೇಳುತ್ತಿದ್ದೇವೆ. ಈಗಲೂ ಅದೇ ವಿಷಯವನ್ನೇ ಉಮೇಶ್ ಕತ್ತಿ ಅವರಿಗೆ ಹೇಳಿದ್ದೇನೆ.  ಕೆಲವು ಮುಳ್ಳುಗಳಿವೆ, ಸರಿಪಡಿಸಿಕೊಂಡು ಬರುತ್ತೇನೆ  ಎಂದಿದ್ದಾರೆ ಎಂದು ಹೇಳಿದರು.

ಇಂದಿನ ಭೇಟಿ ವೇಳೆ ಪ್ರಸ್ತುತ ರಾಜಕೀಯ ವಿದ್ಯಮಾನದ ಬಗ್ಗೆ ಚರ್ಚೆ ನಡೆಸಿದ್ದೇವೆ. ಉಮೇಶ್ ಕತ್ತಿ ಮತ್ತು ನಾನು ಒಂದೇ ಪಕ್ಷದಲ್ಲಿ ಇದ್ದವರು. ಹಿಂದೆ ನಾವಿಬ್ಬರೂ ಒಟ್ಟಿಗೆ ಇದ್ದವರು.  ಮುಂದೇ ರಾಜಕೀಯ ಹೇಗಿರುತ್ತದೆ ಎಂದು ಗೊತ್ತಿಲ್ಲ. ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆ ಎಂದು ತಿಳಿದುಕೊಳ್ಳಬೇಡಿ ಎಂದು ಬಸವರಾಜ್ ಹೊರಟ್ಟಿ ತಿಳಿಸಿದರು.

Key words: JDS -MLC- Basavaraj horatti-  invited – MLA -Umesh katti

 

website developers in mysore