ಜೇಮ್ಸ್ ಎತ್ತಂಗಡಿಗೆ ಸಿಟ್ಟಾದ ಫ್ಯಾನ್ಸ್, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ: ಆರ್ ಆರ್ ಆರ್ ಫೊಸ್ಟರ್ ಹರಿದು ಆಕ್ರೋಶ.

ಬೆಂಗಳೂರು,ಮಾರ್ಚ್,24,2022(www.justkannada.in):  ಆರ್ ಆರ್ ಆರ್ ಸಿನಿಮಾಗಾಗಿ ನಟ ದಿ. ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಎತ್ತಂಗಡಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಇ ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಅಪ್ಪು ಅಭಿಮಾನಿಗಳು ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ತ್ರಿವೇಣಿ ಥಿಯೇಟರ್ ಎದುರು  ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ ಪ್ರತಿಭಟನೆ ನಡೆಸಿದ್ದು ಪರಭಾಷೆ ಸಿನಿಮಾಗಾಗಿ ಕನ್ನಡ ಸಿನಿಮಾ ತೆಗೆಯಬಾರದು ಎಂದು ಪ್ರವೀಣ್ ಶೆಟ್ಟಿ ಆಗ್ರಹಿಸಿದರು.

ಇನ್ನು ಆರ್ ಆರ್ ಆರ್ ಸಿನಿಮಾ ಹಾಕಿದ ಹಿನ್ನೆಲೆ ಬೆಂಗಳೂರಿನ ಅನುಪಮಾ ಚಿತ್ರಮಂದಿರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು ಆರ್ ಆರ್ ಆರ್ ಚಿತ್ರದ ಪೋಸ್ಟರ್ ಗಳನ್ನ ಹರಿದು ಹಾಕಿ ಪ್ರತಿಭಟನೆ ನಡೆಸಿದರು. ಈ ಮಧ್ಯೆ ಫಿಲಂ ಚೇಂಬರ್ ಬಳಿಯೂ ಕರವೇ ಪ್ರತಿಭಟನೆ ನಡೆಸಿದ್ದು,  ಯಾವುದೇ ಕಾರಣಕ್ಕೂ ಜೇಮ್ಸ್ ತೆಗೆದು ಆರ್ ಆರ್ ಆರ್ ಗೆ ಅವಕಾಶ ಕೊಡಬಾರದು ಆಗ್ರಹಿಸಿದರು.

Key words: James-protests-Kannada organizations-RRR