ಮೈಮುಲ್ ಅಕ್ರಮ ನೇಮಕಾತಿ ಆರೋಪ: ಸಾರಾ ಮಹೇಶ್ ಮಾತು ಕೇಳಿಕೊಂಡು ತನಿಖೆ ಮಾಡೋಕೆ ಆಗುತ್ತಾ ಎಂದ ಸಚಿವ ಸೋಮಶೇಖರ್

ಮೈಸೂರು, ಮೇ 21, 2020 (www.justkannada.in): ಮೈಮುಲ್ ಅಕ್ರಮ ನೇಮಕಾತಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಾ ರಾ ಮಹೇಶ್ ಕೇಳಿಕೊಂಡು ತನಿಖೆ ಮಾಡೋಕೆ ಆಗುತ್ತಾ? ಪ್ರತಿಭಟನೆ ಬ್ಲಾಕ್ ಮೇಲ್ ಗೆ ನಾವು ಬಗ್ಗೋದಿಲ್ಲ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬ್ಬಂದಿ ಇಲ್ಲದೆ ಡೈರಿ ನಡೆಸೋಕೆ ಸಾದ್ಯ ಇಲ್ಲ ಅಂತ ಎಂಡಿ ಹೇಳ್ತಾರೆ. ಹಾಗಾಗಿ ಆರು ತಿಂಗಳಿನಿಂದಲೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈಗ ನೇಮಕಾತಿಯಾಗುತ್ತಿರೊ ಹುದ್ದೆಗಳಿಗೆ ಅನುಮೋದನೆ ತಂದವ್ರೆ. ಸಾ ರಾ ಮಹೇಶ್ ಆರೋಪ ಮಾಡ್ತಾರೆ ಅಂತ ನೇಮಕಾತಿ ಪ್ರಕ್ರಿಯೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯಾರು ಏನಾದ್ರು ಹೇಳಿಕೊಳ್ಳಲಿ ಅದಕ್ಕೆಲ್ಲಾ ಉತ್ತರ ಕೊಡೋದಿಲ್ಲ. ಇಲಾಖೆ ತನಿಖೆಗೆ ಆದೇಶ ಕೊಟ್ಟಿದ್ದೇವೆ. ತನಿಖೆ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ. ಯಾರೋ ಆರೋಪ ಮಾಡಿದ್ರು ಅಂತ ಇಡಿ ನೇಮಕಾತಿ ಪ್ರಕ್ರಿಯೆ ಕೈಬಿಡಲು ಸಾಧ್ಯವಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ.