ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆ, ಮಾವುತ-ಕಾವಾಡಿಗಳಿಗೆ 1.65 ಕೋಟಿ ರೂ ಮೌಲ್ಯದ ವಿಮೆ

ಮೈಸೂರು, ಆಗಸ್ಟ್ 07, 2022 (www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆ, ಮಾವುತರಿಗೆ 1.65 ಕೋಟಿ ರೂ ಮೌಲ್ಯದ ವಿಮೆ ಮಾಡಿಸಲಾಗುತ್ತಿದೆ.

ಪ್ರತಿವರ್ಷದಂತೆ ಮೈಸೂರು ಜಿಲ್ಲಾಡಳಿತದಿಂದ ಇನ್ಶ್ಯುರೆನ್ಸ್ ಪಾಲಿಸಿ ಮಾಡಿಸಲಾಗಿದೆ. ಆ.7 ರಿಂದ ಅಕ್ಟೋಬರ್ 8 ರವರಗೆ ಪಾಲಿಸಿ ಜಾರಿಯಲ್ಲಿ ಇರಲಿದೆ.

ದಸರೆಯಲ್ಲಿ ಪಾಲ್ಗೊಳ್ಳುವ 14 ಆನೆಗಳು ಈ ವಿಮೆ ವ್ಯಾಪ್ತಿಯಲ್ಲಿ ಸೇರಲಿವೆ. ಆನೆಗಳಿಗೆ 59 ಲಕ್ಷ ರೂ ಪಾಲಿಸಿ ಹಾಗೂ ಕಾವಾಡಿ, ಮಾವುತರಿಗೆ 28 ಲಕ್ಷ ರೂ. ವಿಮೆ ಮೊತ್ತ ಇರಲಿದೆ.

ದಸರಾ ವೇಳೆ ಆಸ್ತಿ-ಪಾಸ್ತಿ ಹಾನಿಯಾದರೆ 50 ಲಕ್ಷ ರೂ. ವಿಮೆ ಸಿಗಲಿದೆ. ಇದಕ್ಕಾಗಿ 49,990 ರೂ. ಪಾಲಿಸಿ ಮೊತ್ತ ಜಿಲ್ಲಾಡಳಿತ ಪಾವತಿಸಿದೆ.