ನಾನೊಬ್ಬ ಅಮಾಯಕ, ಮುಗ್ಧ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಡಿಸೆಂಬರ್,06,2020(www.justkannada.in) : ನಾನೊಬ್ಬ ಅಮಾಯಕ, ಮುಗ್ಧ. ಇದೀಗ ರಾಜಕೀಯಕ್ಕೆ ಅಂಬೆಗಾಲು ಇಡುತ್ತಿದ್ದೇನೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಎಲ್ಲಾ ರೀತಿಯ ಅಧಿಕಾರವನ್ನ ಅನುಭವಿಸಿದ್ದಾರೆ. ಅವರಿಗೆ ಇದೀಗ ಏನು ಬೇಕಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.logo-justkannada-mysore

ಸಿದ್ದರಾಮಯ್ಯ ಅಂಡ್ ಟೀಂ ನನ್ನ ಟ್ರ್ಯಾಪ್ ಮಾಡಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸಿಎಂ ಸ್ಥಾನ ಅನುಭವಿಸಿದ್ದಾರೆ. ನಾನು ಕಾಂಗ್ರೆಸ್ ಟೀಂ ನಲ್ಲಿದ್ದೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಾನು ಬಂದ ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದು. ನಾನು ಸಿದ್ದರಾಮಯ್ಯ ಟೀಂ ಅಲ್ಲವೆಂದ ಸ್ಪಷ್ಟನೆ ನೀಡಿದರು.

ಸತ್ಯ ಏನು ಎಂಬುದು ಅವರಿಬ್ಬರಿಗೆ ಮಾತ್ರ ಗೊತ್ತು

ಸಿದ್ದರಾಮಯ್ಯ ಮತ್ರು ಕುಮಾರಸ್ವಾಮಿ ಅವರಿಬ್ಬರ ವಿಚಾರವನ್ನ ನಾನೇಕೆ ಹೇಳಲಿ. ಸತ್ಯ ಏನು ಎಂಬುದು ಅವರಿಬ್ಬರಿಗೆ ಮಾತ್ರ ಗೊತ್ತು. ಇಬ್ಬರು ಸತ್ಯ ಹೇಳ್ತಿಲ್ಲ, ಎಲ್ಲವೂ ಮುಗಿದ ಅಧ್ಯಾಯ ಎಂದು ತಿಳಿಸಿದರು.

I'm innocent-Minister-S.T.Somashekhar

key words : I’m innocent-Minister-S.T.Somashekhar