ಸಿಎಂ ಹಾಗೂ ಕಾಮನ್ ಮ್ಯಾನ್: ರಿಯಲ್ ಸ್ಟಾರ್ ಪೋಸ್ಟ್’ಗೆ ಜೈಹೋ ಎಂದ ಯುವ ಪಡೆ

ಬೆಂಗಳೂರು, ಮೇ 25, 2021 (www.jkustkannada.in): ನಾನು ರಾಜ್ಯದ ಸಿಎಂ ಆಗಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.

ಅಂದಹಾಗೆ ಇದು ರಾಜ್ಯದ ಚೀಫ್ ಮಿನಿಸ್ಟರ್ ಅಲ್ಲ, ಬದಲಿದೆ ಕಾಮನ್ ಮ್ಯಾನ್.

ತಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಆಯ್ಕೆ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಿಎಂ ಆದರೆ ನಾನು ಸಾಮಾಜಿಕ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.

ನೀವು ನನ್ನನ್ನು ಆಯ್ಕೆ ಮಾಡುತ್ತೀರೋ ಇಲ್ಲವೋ ಗೊತ್ತಿಲ್ಲ,. ಆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ನಿಮ್ಮೊಂದಿಗೆ ಖಾಯಂ ಸಿಎಂ (ಸಾಮಾನ್ಯ ಮನುಷ್ಯ)ಆಗಿ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ ಉಪ್ಪಿ.