ಕಿರಿಕ್ ಪಾರ್ಟಿ-2 ಮಾಡೋ ಯೋಚನೆ ಬಂದಿದೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ

ಬೆಂಗಳೂರು, ಫೆಬ್ರವರಿ 27, 2020 (www.justkannada.in): ನಟ ರಕ್ಷಿತ್ ಶೆಟ್ಟಿಗೆ ಕಿರಿಕ್ ಪಾರ್ಟಿ ಸಿನಿಮಾದ ಎರಡನೇ ಭಾಗ ಮಾಡಲು ನಿರ್ಧರಿಸಿದ್ದಾರಂತೆ!

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿದ ಶಾಂತಿ ಕ್ರಾಂತಿ ಹಾಡಿನ ವಿಚಾರ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದು ರಕ್ಷಿತ್ ವಿರುದ್ಧ ವಾರಂಟ್ ಜಾರಿಯಾಗಿದೆ.

ಈ ವಿವಾದ ಒಮ್ಮೆ ಕೋರ್ಟ್ ನಲ್ಲಿ ಇತ್ಯರ್ಥವಾದ ಮೇಲೆ ಮತ್ತೆ ಆ ವಿಚಾರವನ್ನು ಎಳೆದುತರುತ್ತಿರುವುದರಿಂದ ಅಸಮಾಧನಗೊಂಡಿರುವ ರಕ್ಷಿತ್ ಶೆಟ್ಟಿ ಇದೇ ಕಾರಣಕ್ಕೆ ನನಗೀಗ ಕಿರಿಕ್ ಪಾರ್ಟಿ 2 ಮಾಡುವ ಯೋಚನೆ ಬಂದಿದೆ ಎಂದಿದ್ದಾರೆ.

ನನಗೆ ಇದುವರೆಗೆ ಕಿರಿಕ್ ಪಾರ್ಟಿ 2 ನೇ ಭಾಗ ಮಾಡುವ ಯೋಚನೆಯೇ ಇರಲಿಲ್ಲ. ಆದರೆ ಈ ವಿವಾದಗಳೆಲ್ಲಾ ನೋಡಿದ ಮೇಲೆ ಎರಡನೇ ಭಾಗ ಮಾಡುವ ಯೋಚನೆ ಬರುತ್ತಿದೆ ಎಂದಿದ್ದಾರೆ ರಕ್ಷಿತ್.