ಕ್ಯಾನ್ಸರ್ ಗೆ ಹೆದರಿ ಪತ್ನಿ ಮತ್ತು ಮಕ್ಕಳಿಗೆ ವಿಷವುಣಿಸಿ ಕೊಂದ ಪತಿ: ತಾನೂ ಆತ್ಮಹತ್ಯೆಗೆ ಯತ್ನ.

ಬೆಂಗಳೂರು,ಮಾರ್ಚ್,2,2023(www.justkannada.in): ಪತಿಯೊಬ್ಬ ಕ್ಯಾನ್ಸರ್ ಗೆ ಹೆದರಿ ತನ್ನ ಪತ್ನಿ ಮತ್ತು ಮಕ್ಕಳಿಗೆ ವಿಷವುಣಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಘಟನೆ ನಡೆದಿದೆ. ನಾಗೇಂದ್ರ ಎಂಬಾತನಿಂದ ಈ ಕೃತ್ಯ ನಡೆದಿದೆ. ಪತ್ನಿ ವಿಜಯ (28), ಮಕ್ಕಳಾದ ನಿಷಾ(7), ದೀಕ್ಷಾ (5)ಗೆ ವಿಷವುಣಿಸಿ ಕೊಂದಿದ್ದಾನೆ. ತಾನು ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದು, ತನ್ನ ಹೆಂಡತಿ ಮಕ್ಕಳನ್ನು ಯಾರೂ ನೋಡಿಕೊಳ್ಳಲು ಆಗಲ್ಲ. ಅವರಿಗೆ ಕಷ್ಟವನ್ನು ಕೊಡುವುದು ಬೇಡವೆಂದು ಈ ಕೃತ್ಯವೆಸಗಿದ್ದಾನೆ.

ಕೆಲವು ವರ್ಷಗಳಿಂದ ನಾಗೇಂದ್ರ ಕ್ಯಾನ್ಸರ್ ನಿಂದ ಬಳಲುತ್ತಿದ್ದನು. ಈ ಮಧ್ಯೆ ಕುಟುಂಬದ ಜವಾಬ್ದಾರಿಯನ್ನ ಪತ್ನಿ ವಿಜಯ ವಹಿಸಿದ್ದರು. ಕುಟುಂಬ ನಿರ್ವಹಣೆ ವಿಚಾರದಲ್ಲಿ ಪತಿ ಪತ್ನಿ ನಡುವೆ ಕಲಹ ಉಂಟಾಗಿತ್ತು. ಈ ಮಧ್ಯೆ ನಾಗೇಂದ್ರ ಊಟದಲ್ಲಿ ತಿಗಣೆ ಔಷಧಿ, ಇಲಿ ಔಷಧಿ ಬೆರೆಸಿ ಹೆಂಡತಿ ಮಕ್ಕಳನ್ನ ಕೊಂದಿದ್ದಾನೆ  ನಂತರ  ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನ ರಕ್ಷಣೆ ಮಾಡಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Husband – poison- wife – children-death-suicide