ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ತು ಹತ್ಯೆ ಮಾಡಿದ ಪತಿ.

ಹಾಸನ,ಆಗಸ್ಟ್,13,2022(www.justkannada.in): ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತುಕೊಯ್ದು ಪತಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೇ ನರಸೀಪುರ ಕೋರ್ಟ್ ಆವರಣದಲ್ಲಿ ನಡೆದಿದೆ.

ಶಿವಕುಮಾರ್ ಎಂಬಾತನೇ ಪತ್ನಿ ಚೈತ್ರ ಕತ್ತುಕೊಯ್ದು ಹತ್ಯೆಗೈದಿದ್ದಾನೆ. ಕಳೆದ 7 ವರ್ಷದ ಹಿಂದೆ ಇಬ್ಬರು ವಿವಾಹವಾಗಿದ್ದರು. ಈ ಮಧ್ಯೆ ಹೊಂದಾಣಿಕೆ ಕೊರೆತೆಯಿಂದ ಕೋರ್ಟ್ ಮೊರೆ ಹೋಗಿದ್ದರು. ವಿಚ್ಛೇದನದ ಪ್ರಕರಣ ಹೊಳೆನರಸೀಪುರದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ಲೋಕ ಅದಾಲತ್ ನಲ್ಲಿ ರಾಜಿ ಸಂದಾನಕ್ಕೆ ಶಿವಕುಮಾರ್ ಒಪ್ಪಿದ್ಧ ಎನ್ನಲಾಗಿದೆ. ಈ ನಡುವೆ ಚೈತ್ರಾ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದರು. 10 ನಿಮಿಷ ಮಾತುಕತೆಗೆ ಸಮಯ ನೀಡಲಾಗಿತ್ತು. ಪತ್ನಿ ಚೈತ್ರ ಶೌಚಾಲಯಕ್ಕೆ ತೆರಳಿದ್ಧ ವೇಳೆ ಶಿವಕುಮಾರ್ ಪತ್ನಿಯನ್ನ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಈ ಸಮಯದಲ್ಲಿ ಅಲ್ಲಿಂದ ಶಿವಕುಮಾರ್ ಪರಾರಿಯಾಗಲು ಯತ್ನಿಸಿದ್ದು ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚೈತ್ರಾಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆ ತಂದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Key words:  husband -killed -his -wife -court