ಹುಣಸೂರು ಬೈ ಎಲೆಕ್ಷನ್: ಸಿ.ಪಿ ಯೋಗೇಶ್ವರ್ ಸಂಧಾನ ಯಶಸ್ವಿ: ನೂರಾರು ಬೆಂಬಲಿಗರೊಂದಿಗೆ ‘ಕೈ’ ಮುಖಂಡ ಬಿಜೆಪಿಗೆ…

ಹುಣಸೂರು,ನ,28,2019(www.justkannada.in):  ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ  ಭಾರಿ ಕುತೂಹಲ ಕೆರಳಿಸಿರುವ ಹುಣಸೂರು ಉಪ ಚುನಾವಣಾ ಕಣ ರಂಗೇರಿದೆ. ಈ ನಡುವೆ  ಹುಣಸೂರಿನಲ್ಲಿ ಬಿಜೆಪಿಯಿಂದ ಒಕ್ಕಲಿಗರ ಮತ ಬೇಟೆ ಮುಂದುವರೆದಿದ್ದು ಕಾಂಗ್ರೆಸ್ ಮುಖಂಡರೊಬ್ಬರನ್ನ ಬಿಜೆಪಿಗೆ ಕರೆತರಲು ಸಿ.ಪಿ.ಯೋಗೇಶ್ವರ್  ನಡೆಸಿದ ಸಂಧಾನ ಯಶಸ್ವಿಯಾಗಿದೆ.

ಹುಣಸೂರಿನ  ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರು, ಮತ್ತು ಮೈಸೂರು ಹಾಲು ಒಕ್ಕೂಟದ ಮಾಜಿ‌ ಅಧ್ಯಕ್ಷ ಹಾಗೂ ಕಾಂಗ್ರೆಸ್ ನ ಮುಖಂಡರಾದ ರಾಮಕೃಷ್ಣಗೌಡ ಅವರು ತಮ್ಮ ನೂರಾರು ಬೆಂಬಲಿಗರೂಂದಿಗೆ ಬಿಜೆಪಿ ಪಕ್ಷವನ್ನ ಸೇರ್ಪಡೆಯಾಗಿದ್ದಾರೆ.

ತೇಗದ ನಾಡಿನಲ್ಲಿ ಕಮಲ ಅರಳಿಸಲು  ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದು ಸಿ.ಪಿ.ಯೋಗೇಶ್ವರ್ ತಂತ್ರದಿಂದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಗೆ ಒಕ್ಕಲಿಗರ ಬಲ ದಿನೇ ದಿನೇ ಹೆಚ್ಚುತ್ತಿದೆ. ಈ ಮಧ್ಯೆ ಹುಣಸೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹೀಗಾಗಿ ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ನ ಮುಖಂಡರಾದ ರಾಮಕೃಷ್ಣಗೌಡರ ಜತೆ ಮಾತುಕತೆ ನಡೆಸಿ ಬಿಜೆಪಿಗೆ ಸೆಳೆದಿದ್ದಾರೆ. ರಾಮಕೃಷ್ಣಗೌಡರು ತಮ್ಮ ಬೆಂಬಲಿಗರೊಂದಿಗೆ ಕಮಲ ಮುಡಿಯಲು ಮುಂದಾಗಿದ್ದಾರೆ.

Key words: hunsur- by-election-CP Yogeshwar –successful-congress- leader –supporters- join – BJP