ಶಿರಾದಲ್ಲಿ ಹುಲಿಯಾ ಮತ್ತಿತರ ಕಾಡುಪ್ರಾಣಿಗಳ ಕಾಟ ಶುರುವಾಗಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆ

ಮೈಸೂರು,ಅಕ್ಟೋಬರ್,29,2020(www.justkannada.in) : ಶಿರಾದಲ್ಲಿ ಹುಲಿಯಾ ಮತ್ತಿತರ ಕಾಡುಪ್ರಾಣಿಗಳ ಕಾಟ ಶುರುವಾಗಿದೆ. ಇಲ್ಲಿ ಬಂಡೆಯ ಸಮಸ್ಯೆ ಇದೆಯೆಂದು ಸ್ಥಳೀಯರು ಪ್ರಸ್ತಾಪ ಮಾಡಿದ್ದಾರೆ. ಬಂಡೆಯಂತ ಸಮಸ್ಯೆ ಪರಿಹಾರ ಮಾಡುವಂತಹ ನಾಯಕ ಯಡಿಯೂರಪ್ಪ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.jk-logo-justkannada-logo

ಮಹಾಭಾರತದ ಧರ್ಮ ಯುದ್ಧದಲ್ಲಿ ಗೆದ್ದದ್ದು ಪಾಂಡವರು. ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಂಡೆಯ ಸಮಸ್ಯೆಯನ್ನು ನಾವು ಪರಿಹಾರ ಮಾಡುತ್ತೇವೆ. ಶಿರಾ ಕ್ಷೇತ್ರದ ಜನತೆ ಕನಕಪುರದ ಬಂಡೆಯನ್ನು ಒಡೆಯಬೇಕು ಎಂದು ತಿಳಿಸಿದ್ದಾರೆ.

key words : Hulia-other-wild-animals-Shira-began-
BJP president-Nalin Kumar Katil-criticized