ರಾಮಮಂದಿರ ಕಟ್ಟುವ ಮೋದಿ ರಾವಣ ಹೇಗಾಗುತ್ತಾರೆ..? ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ವಾಗ್ದಾಳಿ.

ಬೆಂಗಳೂರು,ಡಿಸೆಂಬರ್,3,2022(www.justkannada.in):  ಪ್ರದಾನಿ ನರೇಂದ್ರ ಮೋದಿ ಅವರನ್ನ ರಾವಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಪ್ರಧಾನಿ ಮೋದಿಯನ್ನ ಕಾಂಗ್ರೆಸ್ಸಿಗರು ರಾವಣ ಅಂತಾರೆ. ರಾಮಮಂದಿರ ಕಟ್ಟು ಮೋದಿ ರಾವಣ ಹೇಗಾಗುತ್ತಾರೆ. ದಿನಕ್ಕೊಂದು ಮನಸ್ಥಿತಿ ಬದಲಿಸುವ ಕಾಂಗ್ರೆಸ್ ನವರೇ ರಾವಣ.  ಕರಸೇವರ ಮೇಲೆ ಗೋಲಿಬಾರ್ ಮಾಡಿದವರು ರಾವಣ ಆಗುತ್ತಾರೆ.’ ಕಾಂಗ್ರೆಸ್ ನಾಯಕರ ಹೇಳಿಕೆಗೆ ಗುಜರಾತ್ ಜನ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.BL Santosh - selection -candidates - Rajya Sabha-minister-CT Ravi.

Key words: How – Modi -Ravana -builds -Ram Mandir – CT Ravi –against- Congress.