ಕರಾವಳಿ ಕರ್ನಾಟಕ, ಕೇರಳದಲ್ಲಿ ಇಂದು ಮತ್ತೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ, ಆಗಸ್ಟ್ 25, 2019 (www.justkannada.in): ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಮತ್ತೆ ಇಂದು ಭಾರಿ ಮಳೆಯಾಗುವ ಸಂಭವವಿದೆ.

ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು ಕಡೆ ಭೂಕುಸಿತ ಮತ್ತು ಗುಡ್ಡ ಕುಸಿತದ ಅಪಾಯ ಇರುವುದರಿಂದ ಕೆಲ ರೈಲುಗಳನ್ನು ರೈಲ್ವೇ ಇಲಾಖೆ ಸ್ಥಗಿತಗೊಳಿಸಿದೆ.

ದಕ್ಷಿಣ ರೈಲ್ವೇ ವಿಭಾಗದ ದುರಂತೋ ಎಕ್ಸ್ ಪ್ರೆಸ್ , ಟೆನ್ ಎಕ್ಸ್ ಪ್ರೆಸ್, ಟಿವಿಸಿ ನೇತ್ರಾವತಿ ಎಕ್ಸ್ ಪ್ರೆಸ್. ಈಆರ್ ಎಸ್ ಎಕ್ಸ್ ಪ್ರೆಸ್, ಪುಣೆ ಎಕ್ಸ್ ಪ್ರೆಸ್, ಲೊಕಮಾನ್ಯ ತಿಲಕ್ ಟರ್ಮಿನಸ್, ಮೊದಲಾದ ರೈಲು ಸೇವೆಯನ್ನು ಮುಂದಿನ ಐದು ದಿನ ರದ್ದು ಗೊಳಿಸುವ ಸಾಧ್ಯತೆಯಿದೆ.