ಹೆಚ್.ಡಿಕೆ, ಸಿದ್ದು ಸಿಎಂ ಆಗಿದ್ದಾಗ 70 ಕೇಸ್ ಮುಚ್ಚಿ ಹಾಕಿದ್ದಾರೆ: ಜೆಡಿಎಸ್,ಕಾಂಗ್ರೆಸ್ ಅಣ್ಣತಮ್ಮಂದಿರು- ಸಚಿವ ಆರ್.ಅಶೋಕ್.

kannada t-shirts

ರಾಮನಗರ,ಮಾರ್ಚ್,4,2023(www.justkannada.in):  ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್ ಜೆಡಿಎಸ್ ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ರಾಮನಗರದ ಮತ್ತಿಕೆರೆಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ.  ಈ ಬಗ್ಗೆ ಮಾತನಾಡಲು ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ಧಾಗ ಹೋಟೆಲ್ ನಲ್ಲಿ ಆಡಳಿತ ಮಾಡಿದ್ದಾರೆ. ಕುಮಾರಸ್ವಾಮಿಯಿಂದ ನಾವು ಪಾಠ ಕಲಿಯಬೇಕಿಲ್ಲ.  ಹೆಚ್.ಡಿಕೆ ಮತ್ತು ಸಿದ್ದರಾಮಯ್ಯ ಸಿಎಂ ಆಗಿದ್ದಾಗ 70 ಕೇಸ್ ಮುಚ್ಚಿಹಾಕಿದ್ದಾರೆ ಜೆಡಿಎಸ್ ಕಾಂಗ್ರೆಸ್ ಅಣ್ಣತಮ್ಮಂದಿರು  ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಸರ್ಕಾರ ಇದ್ದಿದ್ದರೇ ಎಲ್ಲವನ್ನೂ ಮುಚ್ಚಿ ಹಾಕುತ್ತಿದ್ದರು. ಕಿಚಡಿ ಸರ್ಕಾರ ಬೇಡ ಸ್ಥಿರ ಸರ್ಕಾರ ಬೇಕಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

Key words: HDK- Siddaramaiah -closed -70 cases-Minister- R. Ashok.

website developers in mysore