ಹಾಸನ ಟಿಕೆಟ್ ವಿಚಾರ: ದೇವೇಗೌಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ- ಹೆಚ್.ಡಿ ರೇವಣ್ಣ.

ಹಾಸನ,ಏಪ್ರಿಲ್,3,2023(www.justkannada.in): ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು.

ಹಾಸನದ ಹೊಳೇನರಸಿಪುರ ತಾಲ್ಲೂಕಿನ ಮೂಡಲಹಿಪ್ಪೆಯಲ್ಲಿ ಮಾತನಾಡಿದ ಹೆಚ್,ಡಿ ರೇವಣ್ಣ,  ರಾತ್ರಿ 11ರವರೆಗೆ  ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ  ದೇವೇಗೌಡರ ಅವರ  ನನ್ನ ಜೊತೆ ಮಾತನಾಡಿದ್ದಾರೆ. ಹೆಚ್.ಡಿ ದೇವೇಗೌಡರಿಗೆ 60 ವರ್ಷಗಳ ರಾಜಕೀಯ ಅನುಭವವಿದೆ. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ದೇವೇಗೌಡರು ತೀರ್ಮಾನ ಮಾಡುತ್ತಾರೆ. ದೇವೇಗೌಡರ ತೀರ್ಮಾಣಕ್ಕೆ ನಾವೆಲ್ಲಾ ಬದ್ಧ ಎಂದು ತಿಳಿಸಿದರು.

Key words: Hassan -ticket –issue- HD Deve Gowda-decision-  HD Revanna.