ಶಾಲಾ ಕೊಠಡಿಯೊಳಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ….

ಹಾಸನ,ಜು,4,2019(www.justkannada.in): ವಿದ್ಯಾರ್ಥಿನಿ ನೇನುಬಿಗಿದುಕೊಂಡು ಶಾಲಾ ಕೊಠಡಿಯೊಳಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ತಾಲ್ಲೂಕಿನ ಗಾಡೇನಹಳ್ಳಿಯಲ್ಲಿರುವ ಕ್ರಿಶ್ಚಿಯನ್ ಪ್ರೌಢ ಶಾಲೆ ಲಯೋಲ ಕಾಂಪನ್ಸೇಟೀವ್ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಲಕ್ಷ್ಮೀ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.  ಅದೇ ಶಾಲೆಯಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ 10ನೇತ ತರಗತಿ ವ್ಯಾಸಾಂಗ ಮಾಡುತ್ತಿದ್ದಳು.

ಈನಡುವೆ ಆಕೆಯ ಪೋಷಕರು ಬೆಂಗಳೂರು ವಾಸಿಯಾಗಿದ್ದು, ಮೃತ ಲಕ್ಷ್ಮೀ  ಕಳೆದ ವಾರ ಶಾಲೆಯೊಂದಿಗೆ ಹಾಸ್ಟಲ್ ಗೆ ಸೇರಿದ್ದಳು. ರಾತ್ರಿ ವೇಳೆ ಓದುವಾಗ ಯಾರು ಇಲ್ಲದ ಸಂದರ್ಭದಲ್ಲಿ ಲಕ್ಷ್ಮಿಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Hassan-student – committed- suicide – school room.