ಎಂಎಲ್ ಸಿ ಆಗುತ್ತಿದ್ದಂತೆ ಹುಣಸೂರಿಗೆ ಹೆಚ್.ವಿಶ್ವನಾಥ್ ಭೇಟಿ: ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ…?

kannada t-shirts

ಹುಣಸೂರು,ಜು,23,2020(www.justkannada.in): ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನವಾದ ಹಿನ್ನೆಲೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಇಂದು ಹುಣಸೂರಿಗೆ ಭೇಟಿ ನೀಡಿ ಮಾಜಿ ಸಿಎಂ ಡಿ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.jk-logo-justkannada-logo

ಮಾಜಿ ಸಿಎಂ ಡಿ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್, ಎಂಎಲ್ ಸಿ ಆಗಿ ನಾಮನಿರ್ದೇಶನ ಮಾಡಿರುವುದು ಸಹಜವಾಗಿ ಖುಷಿ ನೀಡಿದೆ. ಇದರೊಂದಿಗೆ ಹುಣಸೂರಿಗೆ ಇಬ್ಬರು ಶಾಸಕರಾದಂತೆ ಆಗಿದೆ. ಪಕ್ಷ ಬೇದ ಮರೆತು ಸಿಎಂ ಯಡಿಯೂರಪ್ಪ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಇನ್ನು ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಚಿವನಾಗುವುದು ಅಥವಾ ಬಿಡುವುದು ಈಗ ಮುಖ್ಯ ಅಲ್ಲ. ಸಚಿವ ಸ್ಥಾನ ಬೇಕು ಅಂತ ಕೇಳುವುದು ಸರಿಯಲ್ಲ. ಮುಂದೆ ಏನಾಗುತ್ತೋ ನೋಡೊಣ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದ ಹಳ್ಳಿಹಕ್ಕಿ…

ಎಂಎಲ್ ಸಿ ಆಗುತ್ತಿದ್ದಂತೆ ಹೆಚ್.ವಿಶ್ವನಾಥ್ ಅವರು ಸಂಸದ ಶ್ರೀನಿವಾಸ್ ಪ್ರಸಾದ್  ಭೇಟಿ ಮಾಡಿದ್ದಾರೆ. ಮೈಸೂರಿಗೆ ಆಗಮಿಸುತ್ತಿದ್ದಂತೆ ಮೊದಲು ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನ ಭೇಟಿಯಾದರು. ಎಂಎಲ್ ಸಿಯಾದ ಹೆಚ್. ವಿಶ್ವನಾಥ್ ಅವರಿಗೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಶುಭಕೋರಿದರು.
ಎಚ್ ವಿಶ್ವನಾಥ್ ಗೆ ಎಂಎಲ್ ಸಿ ಸ್ಥಾನ ನೀಡುವಂತೆ ವಿಶ್ವನಾಥ್ ಪರ  ಶ್ರೀನಿವಾಸ್ ಪ್ರಸಾದ್ ಬ್ಯಾಟ್ ಬೀಸಿದ್ದರು. ಹೀಗಾಗಿ ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

Key words: H.Vishwanath –visits- Hunsur-ministerial -position,

website developers in mysore