ಮೈಸೂರು ಮಹಾನಗರ ಪಾಲಿಕೆ  ನೂತನ ಅಯುಕ್ತರಾಗಿ ಗುರುದತ್ತ ಹೆಗ್ಡೆ ನೇಮಕ…

ಮೈಸೂರು,ಆ,17,2019(www.justkannada.in):  ಮೈಸೂರು ಮಹಾನಗರ ಪಾಲಿಕೆಯ  ನೂತನ ಅಯುಕ್ತರಾಗಿ ಗುರುದತ್ತ ಹೆಗ್ಡೆ ಅವರನ್ನ ನೇಮಕ ಮಾಡಲಾಗಿದೆ.

ಸೆಪ್ಟಂಬರ್ 28ರಿಂದ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗಲಿದ್ದು, ಈ ಹಿನ್ನಲೆ ಹೊಸ ಐಎ ಎಸ್ ಅಧಿಕಾರಿಯನ್ನ  ನಿಯೋಜನೆ ಮಾಡಲಾಗಿದೆ. ಐ ಎ ಎಸ್ ಅಧಿಕಾರಿ ಗುರುದತ್ತ ಹೆಗ್ಡೆ ಅವರು ಐ ಎ  ಎಸ್  ಪರೀಕ್ಷೆ ಯಲ್ಲಿ 25 ರ್ಯಾಂಗ್ ಪಡೆದಿದದ್ದರು.

ಹಿಂದಿನ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರು ರಜೆಯಲ್ಲಿರುವುದರಿಂದ  ಪಾಲಿಕೆಯಲ್ಲಿ ಪ್ರಭಾರ ಆಯುಕ್ತರಾಗಿ ಕಾಂತರಾಜ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಗುರುದತ್ತ ಹೆಗ್ಡೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Key words: Gurudatta Hegde -appointed -new Commissioner – Mysore-city corporation