ಮನೆ ಬಾಗಿಲಿಗೆ ಸರ್ಕಾರ: ತಮ್ಮ ಕ್ಷೇತ್ರದ ಜನರ ಸಮಸ್ಯೆ ಆಲಿಸಲಿರುವ ಸಚಿವ ನಾರಾಯಣಗೌಡ…

ಮಂಡ್ಯ,ಆಗಸ್ಟ್,28,2020(www.justkannada.in):  ಪುರಾಡಳಿತ, ತೋಟಗಾರಿಕೆ ಹಾಗು ರೇಷ್ಮೆ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ  ಡಾ| ನಾರಾಯಣ ಗೌಡ ಅವರು ಇದೇ ಶನಿವಾರದಿಂದ  ತಮ್ಮ ಕ್ಷೇತ್ರ ಕೆ‌.ಆರ್. ಪೇಟೆಯ ಜನರ ಮನೆ ಬಾಗಿಲಿಗೆ ಬಂದು ರೈತರ ಹಾಗು ತಾಲೂಕಿನ ಪ್ರಜೆಗಳ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಥಳದಲ್ಲೇ ಪರಿಹಾರ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ‌‌. jk-logo-justkannada-logo

ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಹಾಜರು  ಇದ್ದು ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲೀದ್ದಾರೆ. ಈ ಕಾರ್ಯಕ್ರಮವನ್ನು  ಮುಖ್ಯಮಂತ್ರಿಗಳ ತವರೂರಾದ ಬೂಕನಕೆರೆ ಹೋಬಳಿಯಿಂದ ಆರಂಭಿಸಲಿದ್ದಾರೆ‌. ಮುಂದೆ ಕ್ಷೇತ್ರದ ಎಲ್ಲ ಹೋಬಳಿಯಲ್ಲೂ ಈ ಕಾರ್ಯಕ್ರಮ ಮಾಡಲು ಸಚಿವರು ನಿರ್ಧರಿಸಿದ್ದಾರೆ‌.

Key words: Government -Minister -Narayana Gowda – listen – problems – people – constituency.