ಮೈಸೂರಲ್ಲಿ ಶೀಘ್ರವೇ ತಲೆ ಎತ್ತಲಿದೆ ಜಾಗತಿಕ ಅಕ್ಕಿ ತಂತ್ರಜ್ಞಾನ‌ ಕೇಂದ್ರ

ಮೈಸೂರು, ಫೆಬ್ರವರಿ 22, 2020 (www.justkannada.in): ಮೈಸೂರಿನಲ್ಲಿ ಜಾಗತಿಕ ಅಕ್ಕಿ ತಂತ್ರಜ್ಞಾನ‌ ಕೇದ್ರ ತಲೆ ಎತ್ತಲಿದೆ.

ಹೌದು, ದೇಶದ ಮೊದಲ ಅಕ್ಕಿ ತಂತ್ರಜ್ಞಾನ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ.

ಸಿಫ್ ಟಿ ಆರ್ ಐ, ಅಪಿಐಟಿ, ಗ್ಲೋಬಲ್ ಸೆಂಟರ್ ಫಾರ್ ರೈಸ್ ಟೆಕ್ನಾಲಜಿ ಸಹಯೋಗದಲ್ಲಿ ಕೆಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ಎಪಿಐಟಿ ಮುಖ್ಯಸ್ಥ ಸುದ್ ಮುಖರ್ಜಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ವೈಜ್ಞಾನಿಕವಾಗಿ ಅಕ್ಕಿ ಸಂರಕ್ಷಣೆ ಮಾಡುವ ತಂತ್ರಜ್ಞಾನ ಇದಾಗಿದೆ. ವಿಶ್ವದಲ್ಲಿ ಶೇ 50 ರಷ್ಟು ಜನರು ಅಕ್ಮಿ ಉಪಯೋಗಿಸುತ್ತಾರೆ. ಹೊಸ ತಂತ್ರಜ್ಞಾನದ ಮೂಲಕ ಅಕ್ಕಿ ಸಂರಕ್ಷಣೆ ಇದಾಗಿದೆ. ಇದರಿಂದ ರೈತರಿಗೂ ಕೂಡ ಅನುಕೂಲವಾಗಲಿದೆ ಎಂದು ಸುದ್ ಮುಖರ್ಜಿ ಹೇಳಿದ್ದಾರೆ.