ಕೊಯ್ಲಿ ವಿರುದ್ಧ ಗೌತಮ್ ಗಂಭೀರ್ ಗರಂ !

ಬೆಂಗಳೂರು, ಡಿಸೆಂಬರ್ 01, 2020 (www.justkannada.in): ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೊಯ್ಲಿ ವಿರುದ್ಧ ಗರಂ ಆಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಕೈಚೆಲ್ಲಿರುವ ಟೀಮ್ ಇಂಡಿಯಾವನ್ನು ಗೌತಮ್ ಗಂಭೀರ್ ತರಾಟೆಗೆ ತೆಗೆದುಕೊಂಡಿದ್ದಾರೆ, ಕೊಹ್ಲಿ ಅವರದ್ದು ಕಳಪೆ ನಾಯಕತ್ವ ಎಂದು ಟೀಕಿಸಿದ್ದಾರೆ.

2 ನೇ ಪಂದ್ಯದಲ್ಲಿ ಬುಮ್ರಾ ಮೊದಲ ಓವರ್‌ನಲ್ಲಿ ಕೇವಲ 7 ರನ್ ನೀಡಿ , ಇನ್ನಿಂಗ್ಸ್‌ನ 2 ನೇ & 4 ನೇ ಓವರ್ ಎಸೆದರು . ಬುಮ್ರಾ ಪವರ್ ಪ್ಲೇನಲ್ಲಿ ಇನ್ನೊಂದು ಓವರ್ ಎಸೆಯಬಹುದಿತ್ತು.

ಆದರೆ , ಕೊಹ್ಲಿ ಬುಮ್ರಾಗೆ ಕೇವಲ ಎರಡು ಓವರ್ ಯಾಕೆ ಕೊಟ್ಟರು ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಈ ಮೂಲಕ ಕೊಯ್ಲಿಯದ್ದು ಕಳಪೆ ಕ್ಯಾಪ್ಟನ್’ಶಿಪ್ ಎಂಟು ಟೀಕಿಸಿದ್ದಾರೆ.