ವಿಸಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ: ರಾಮಸೇನೆ ಸಂಸ್ಥಾಪಕನ ಬಂಧನ…

kannada t-shirts

ಮಂಗಳೂರು,ಮಾರ್ಚ್,29,2021(www.justkannada.in):  ವಿಸಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ರಾಮಸೇನೆ ಸಂಸ್ಥಾಪಕನನ್ನ ಮಂಗಳೂರಿನ ಕಂಕನಾಡಿ ಟೌನ್ ಪೊಲೀಸರು ಬಂಧಿಸಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ(41) ಬಂಧಿತ ಆರೋಪಿ. ರಾಯಚೂರು ವಿವಿಯಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿವಿಯ ಪ್ರೊಫೆಸರ್ ಗೆ ನಂಬಿಸಿ ಪ್ರಸಾದ್ ಅತ್ತಾವರ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.

ಈ ನಡುವೆ ಪ್ರೊಫೆಸರ್ ರಿಂದ 17 ಲಕ್ಷ ಹಣವನ್ನ ಪಡೆದಿದ್ದ ಪ್ರಸಾದ್ ಅತ್ತಾವರ ಗಣ್ಯವ್ಯಕ್ತಿಗಳ ಜತೆ ಫೋಟೊ ತೋರಿಸಿ ವಂಚನೆ ಮಾಡಿದ್ದನು. ಈ ನಡುವೆ ಹಣ ವಾಪಸ್ ಕೇಳಿದ್ದಕ್ಕೆ ಹಣ ನೀಡದೆ ಬೆದರಿಕೆ ಹಾಕಿದ್ದನು ಎನ್ನಲಾಗಿದೆ. ಈ ಸಂಬಂಧ ವಿವೇ ಆಚಾರ್ಯ ಎಂಬುವವರ ದೂರಿನ ಮೇರೆಗೆ ಕಂಕನಾಡಿ ಟೌನ್ ಪೊಲೀಸರು ಪ್ರಸಾದ್ ಅತ್ತಾವರ್ ಬಂಧಿಸಿದ್ದಾರೆ.

Key words: Fraud -VC –post-  Arrest -Ramasena founder-mangalore

website developers in mysore