ಹೆಚ್. ವಿಶ್ವನಾಥ್ ವಿರುದ್ಧ ವ್ಯಂಗ್ಯವಾಡಿದ ಮಾಜಿ ಸಚಿವ  ಡಾ. ಹೆಚ್ ಸಿ ಮಹದೇವಪ್ಪ

ಮೈಸೂರು,ಸೆ,20,2019(www.justkannada.in): ಪಕ್ಷಾಂತರ ಎಂಬ ಪತರಗಿತ್ತಿ ಎಂದು ಪುಸ್ತಕ ಬರೆದವರು ಕಾಯ್ದೆಯ ವಿರುದ್ಧವಾಗಿಯೇ  ನಡೆದು ಕೊಂಡರು ಎಂದು  ಅನರ್ಹ ಶಾಸಕ ಹೆಚ್. ವಿಶ್ವನಾಥ್ ವಿರುದ್ಧ ಮಾಜಿ ಸಚಿವ  ಡಾ. ಹೆಚ್ ಸಿ ಮಹದೇವಪ್ಪ ವ್ಯಂಗ್ಯವಾಡಿದರು.

ಇಂದು  ನಗರದ  ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹುಣಸೂರು ಬೈ ಎಲೆಕ್ಷನ್ ಕುರಿತ ಸಭೆಯಲ್ಲಿ  ಮಾತನಾಡಿ ಹೆಚ್.ಸಿ ಮಹದೇವಪ್ಪ, ಕಳೆದ ಚುನಾವಣೆಯಲ್ಲಿ ಹುಣಸೂರಿನಲ್ಲಿ ಮಂಜುನಾಥ್ ಗೆಲ್ಲಿಸಿದ್ರೆ ಈ ರೀತಿ ಬೆಳವಣಿಗೆ ಉಂಟಾಗುತ್ತಿರಲಿಲ್ಲ. ಕಳೆದ  ಚುನಾವಣೆಯಲ್ಲಿ ನಾವು  ಒಳ್ಳೆ  ಜನಪರ ಕೆಲಸ ಮಾಡಿದ್ರು ಸೋಲುಂಟಾಯಿತು,  ನಾನು ನಮ್ಮ  ಅಭಿವೃದ್ಧಿ ಕೆಲಸಗಳನ್ನ ಜನರಿಗೆ ಅರ್ಥೈಸುವಲ್ಲಿ ವಿಫಲರಾದೆವು ಎಂದರು.

ಈಗ ಜನರಿಗೆ ಅರ್ಥ ಆಗಿದೆ,  ಏನೇ ಆಗಲಿ ಈ ಉಪಚುನಾವಣೆಯಲ್ಲಿ ನಾವು ಗೆಲ್ಲಲೇಬೇಕು,  ಒಳ್ಳೆಯ ಅವಕಾಶವಿದೆ, ಒಂದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದು ರಾಜೀನಾಮೆ ನೀಡಿದ್ರು, ಅವರ ಸಿದ್ದಂತಏನಾಯಿತು..? ಪಕ್ಷಾಂತರ ಎಂಬ ಪತರಗಿತ್ತಿ ಎಂದು ಪುಸ್ತಕವನ್ನೇ ಬರೆದವರು ಆದ್ರೆ ಕಾಯ್ದೆಯ ವಿರುದ್ಧವಾಗಿಯೇ  ನಡೆದು ಕೊಂಡರು ಎಂದು  ವಿಶ್ವನಾಥ್ ಹೆಸರು ಹೇಳದೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

Key words: Former minister -H C Mahadevappa-h vishwanath-mysore