ಬಿ.ಸಿ ಪಾಟೀಲ್ ಮತ್ತು ಆನಂದ್ ಸಿಂಗ್ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ….

kannada t-shirts

ದಾವಣಗೆರೆ,ನ,28,2019(www.justkannada.in): ಸಿದ್ದರಾಮಯ್ಯಗೆ  ಹುಂಡಿ ಇದೆ. ಅದು ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಮಹದೇವಪ್ಪ ಮತ್ತು ಕೆಂಪಯ್ಯ ಅವರ ಬಳಿ ಇದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಎಲ್ಲವೂ ತಿಳಿಯುತ್ತದೆ ಎಂದು ಹೇಳಿಕೆ ನೀಡಿದ್ದ  ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್  ಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಬಿ.ಸಿ ಪಾಟೀಲ್  ಹತಾಶರಾಗಿ ಮಾತನಾಡುತ್ತಿದ್ದಾರೆ. ಜನರು ಬಿ.ಸಿ ಪಾಟೀಲ್ ರನ್ನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೆಂಪಯ್ಯ ಐಜಿ ಆಗಿದ್ದವರು. ಬಿ.ಸಿ ಪಾಟೀಲ್ ಇಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದ್ದವರು.  ಬಿ.ಸಿ ಪಾಟೀಲ್ ಪ್ರಕಾರ ಪೊಲೀಸ್ ಇಲಾಖೆ ಲಂಚ ತೆಗೆದುಕೊಳ್ಳುತ್ತಾ..? ಬಿ.ಸಿ ಪಾಟೀಲ್ ಪೊಲೀಸ್ ಇಲಾಖೆ ಬಿಟ್ಟಿದ್ದು ಯಾಕೆ..? ಅವರ ಹೇಳಿಕೆಗೆ ಬೆಲೆ ಕೊಡುವ ಅಗತ್ಯವಿಲ್ಲ. ಜನರು ಬಿಸಿ ಪಾಟೀಲ್ ರನ್ನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಂದು  ತಿಳಿಸಿದರು.

ಹಾಗೆಯೇ ಆನಂದ್ ಸಿಂಗ್ ವಿರುದ್ದ ಹರಿಹಾಯ್ದ ಸಿದ್ಧರಾಮಯ್ಯ,  ಆನಂದ್ ಸಿಂಗ್ ನಂಬಿ ನಾನು ಮೋಸ ಹೋಗಿದ್ದೇನೆ. ನಾನು ಎಲ್ಲಿಯೂ ಹೋಗಲ್ಲ ಎಂದು ಹೇಳಿದ್ದರು. ಆದ್ರೆ ಇದ್ದಕ್ಕಿದ್ದಂತೆ ಬಿಜೆಪಿಗೆ ಸೇರಿಕೊಂಡರು. ಈ ಮೂಲಕ ತಮ್ಮನ್ನ ತಾವೇ ಮಾರಿಕೊಂಡಿದ್ದಾರೆ. ಆನಂದ್ ಸಿಂಗ್ ನಾಲಾಯಕ್ ಎಂದು ಗುಡುಗಿದರು.

Key words: former CM -Siddaramaiah – BJP-candidates- BC Patil -Anand Singh.

website developers in mysore