ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಎಫ್‍ ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್: ಮನವಿ ಸಲ್ಲಿಕೆ

kannada t-shirts

ಬೆಂಗಳೂರು,ಜುಲೈ,2,2021(www.justkannada.in): ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಮತ್ತು ಹಿರಿಯ ಉಪಾಧ್ಯಕ್ಷರಾದ   ಸಿಎ ಡಾ. ಐ.ಎಸ್. ಪ್ರಸಾದ್, ಉಪಾಧ್ಯಕ್ಷ  ಬಿ.ವಿ ಗೋಪಾಲ್ ರೆಡ್ಡಿ ಹಾಗೂ ಪ್ರಭುದೇವ್ ಆರಾಧ್ಯ, ಛೇರ್ಮನ್, ಬ್ಯಾಂಕಿಂಗ್ ಮತ್ತು ಹಣಕಾಸು ಸಮಿತಿ ಎಫ್‍ಕೆಸಿಸಿಐ ಇವರು ಇಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‍ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಈ ಕೆಳಗಿನ ವಿಷಯಗಳ ಕುರಿತು ಮನವಿ ಪತ್ರವನ್ನು ಸಲ್ಲಿಸಿದರು.jk

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಎಂಎಸ್‍ಎಂಇ ವಲಯವನ್ನು ಸುಧಾರಿಸಲು ಮತ್ತು ಕಾರ್ಪೋರೇಟ್ ವ್ಯವಹಾರಗಳಲ್ಲಿನ ಕಾರ್ಯವಿಧಾನಗಳಲ್ಲಿ ಸುಧಾರಣೆಗಳನ್ನು ತರಲು ಈ ಕೆಳಗಿನ ವಿಷಯಗಳ ಕುರಿತು ಚರ್ಚಿಸಿದರು.

  • ಕೆಲವು ವರ್ಷಗಳವರೆಗೆ ಎಂಎಸ್‍ಎಂಇಗಳಿಗಾಗಿ ಎನ್‍ಪಿಎ ಮಾನದಂಡಗಳ ಅನ್ವಯ ಮುಂದೂಡಿಕೆ.
  • ಎಂಎಸ್‍ಎಂಇಗಳಿಗೆ ಎರಡು ವರ್ಷಗಳ ಅವಧಿಗೆ ಸಿಬಿಲ್ ರೇಟಿಂಗ್ ಅನ್ನು ಮುಂದೂಡುವುದು.
  • ಹೊಸ ಸಾಲಗಳನ್ನು ಮಂಜೂರು ಮಾಡಲು ಮತ್ತು ಅಸ್ತಿತ್ವದಲ್ಲಿರುವ ಸಾಲಗಳ ವರ್ಧನೆ ಪ್ರಕ್ರಿಯಾ ಶುಲ್ಕವನ್ನು ಮನ್ನಾ ಮಾಡುವುದು.
  • ಹೆಚ್ಚುವರಿ ಸಾಲಕ್ಕೆ ಹೆಚ್ಚುವರಿ ಭದ್ರತೆಗೆ ಒತ್ತಾಯಿಸದಿರುವುದು.
  • ಇತರೆ ಆರ್ಥಿಕ ಕ್ಷೇತ್ರಗಳಾದ ಗಾರ್ಮೆಂಟ್, ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಅತಿಥ್ಯ ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಸೇವೆಗಳಿಗೆ ಆರ್ಥಿಕ ಉತ್ತೇಜನ ನೀಡುವುದು.
  • ದೈನಂದಿನ ಅಗತ್ಯಗಳಿಗೆ ಅಗತ್ಯವಾದ ಸರಕುಗಳ ಮೇಲಿನ ಜಿಎಸ್‍ಟಿಯನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರ ದರವನ್ನು ತಗ್ಗಿಸುವುದು.
  • ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ಅಡಿಯಲ್ಲಿ ತರುವುದು.
  • ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ((SLBC) ಪ್ರಮುಖ ಬ್ಯಾಂಕುಗಳಲ್ಲಿ ಮತ್ತು ಪಿಎಸ್‍ಯುಗಳ ಮಂಡಳಿಗಳಲ್ಲಿ ಎಫ್‍ಕೆಸಿಸಿಐಗೆ ಪ್ರಾತಿನಿಧ್ಯವನ್ನು ಒದಗಿಸುವುದು.

ಕಾರ್ಪೋರೇಟ್ ವ್ಯವಹಾರಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಈ ಕೆಳಗಿನ ವಿಷಯಗಳ ಬಗ್ಗೆ ವಿನಂತಿಯನ್ನು ಸಲ್ಲಿಸಲಾಯಿತು.

  • ಬಂಡವಾಳವನ್ನು ಸಂಗ್ರಹಿಸುವಾಗ ಖಾಸಗಿ ಉದ್ಯೋಗ ನಿಬಂಧನೆಗಳಿಗೆ ಅನುಸಾರವಾಗಿ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ವಿಧಾನದಿಂದ ವಿನಾಯಿತಿ ನೀಡುವ ಮೂಲಕ ಸ್ಟಾರ್ಟ್-ಆಪ್‍ಗಳನ್ನು ಬೆಂಬಲಿಸುವುದು.
  • ಸರಣಿ ಎ ಫಂಡಿಂಗ್ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಏಂಜಲ್ ಹೂಡಿಕೆದಾರರಿಗೆ ಷೇರುಗಳನ್ನು ಹಂಚಿಕೆ ಮಾಡಲು ಅವಕಾಶ ಮಾಡಿಕೊಡುವುದು.
  • ಕಂಪನಿಗಳ ಹೊಸ ಆರಂಭಿಕ ಯೋಜನೆ ಮತ್ತು ಎಲ್‍ಎಲ್‍ಸಿ ಸೆಟ್ಲ್ಮೆಂಟ್ ಸ್ಕೀಮ್ ಅನ್ನು ಮರಳಿ ತರುವುದು.
  • ಸಣ್ಣ ಕಂಪನಿಗಳಿಗೆ ಅನುಸರಣೆ ಹೊರೆ ಕಡಿಮೆ ಮಾಡಲು ಫಾರ್ಮ್ ಡಿಪಿಟಿ-3 ಅನ್ನು ವಾರ್ಷಿಕ ರಿಟನ್ರ್ಸ್‍ನೊಂದಿಗೆ ವಿಲೀನಗೊಳಿಸುವುದು.
  • ಖಾಸಗಿ ಲಿಮಿಟೆಡ್ ಕಂಪನಿಯಿಂದ ರೂ.20 ಲಕ್ಷದವರೆಗೆ ಸಾಲ ತೆಗೆದುಕೊಳ್ಳುವ ನಿರ್ಬಂಧಗಳನ್ನು ತೆಗೆದುಹಾಕುವುದು.
  • eKYC ಶುಲ್ಕವನ್ನು ರೂ5000/- ರಿಂದ 500/-ಕ್ಕೆ ಕಡಿಮೆ ಮಾಡುವ ಎಂಸಿಎ ಅಡಿಯಲ್ಲಿ 2020-21ರ ಆರ್ಥಿಕ ವರ್ಷಕ್ಕೆ ಎಲ್ಲಾ ಲೇಟ್ ಫೈಲಿಂಗ್ ಶುಲ್ಕವನ್ನು ಮನ್ನಾ ಮಾಡುವುದು.
  • ಎಫ್‍ಎಲ್‍ಎ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲ ವಿಸ್ತರಣೆ ಮತ್ತು ಹೊಸ ಸಿಎಆರ್‍ಓ ನ ಮುಂದೂಡುವುದು.
  • ಶೆಡ್ಯೂಲ್ 3 ಅನ್ನು ಒಂದು ವರ್ಷದ ಅವಧಿಗೆ ಬದಲಾವಣೆ ಮಾಡುವುದು.

ಈ ಎಲ್ಲಾ ವಿಷಯಗಳ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಲಂಕುಷವಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧರಿಸುತ್ತೇನೆಂದು ಎಫ್‍ಕೆಸಿಸಿಐ ನಿಯೋಗಕ್ಕೆ ಭರವಸೆ ನೀಡಿದರು.

Key words: FKCCI -President – Perikal M Sundar-met- Union Minister -Nirmala Sitharaman.

website developers in mysore