ಕಿಡಿಗೇಡಿಗಳಿಂದ ಕೊಟ್ಟಿಗೆಗೆ ಬೆಂಕಿ: ಎರಡು ಜಾನುವಾರು ಸಾವು…

ಚಿಕ್ಕಮಗಳೂರು,ಜನವರಿ,2,2021(www.justkannada.in): ಕೊಟ್ಟಿಗೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಎರಡು ಜಾನುವಾರುಗಳು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. jk-logo-justkannada-mysore

ಚಿಕ್ಕಮಗಳೂರಿನ ಜಾವೂರು ಹೊಸಳ್ಳಿಯಲ್ಲಿ ಈ ಘಟನೆ ನಡೆದಿದೆ.  ಗ್ರಾಮದ ಚಂದ್ರಪ್ಪ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿದ್ದು 2  ಹಸುಗಳು ಮೃತಪಟ್ಟಿವೆ. ನಾಲ್ಕೈದು ಜಾನುವಾರುಗಳು ತೀವ್ರವಾದ ಸುಟ್ಟ ಗಾಯಗಳಿಂದ ನರಳುತ್ತಿವೆ. ಚುನಾವಣೆ ದ್ವೇಷದಿಂದ ಈ ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ.fire-barn-crib-two-cattle-deaths-chikkamagalore

ಕೊಟ್ಟಿಗೆಯಲ್ಲಿದ್ದ ಕೊಬ್ಬರಿ, ತೆಂಗಿನಕಾಯಿಗಳೂ ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ. ಇನ್ನು ಜನರ ನಡುವಿನ ದ್ವೇಷಕ್ಕೆ ಜಾನುವಾರುಗಳನ್ನು ಸಜೀವ ದಹನ ಮಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Key words: Fire –barn – crib- Two- cattle- deaths-chikkamagalore