ತಲ್ವಾರ್ ನಿಂದ ಕೇಕ್ ಕತ್ತರಿಸಿದ ದುನಿಯಾ ವಿಜಯ್ ವಿರುದ್ಧ ಎಫ್’ಐಆರ್

ಬೆಂಗಳೂರು, ಜನವರಿ 2, 2019 (www.justkannada.in): ವಿಜಯ್ ವಿರುದ್ಧ ಮತ್ತೊಂದು ಅರೋಪ ಕೇಳಿಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ದುನಿಯಾ ವಿಜಯ್ ಜ.20ರಂದು ತಮ್ಮ 46ನೇ ಹುಟ್ಟುಹಬ್ಬದ ದಿನ ತಲ್ವಾರ್ ನಲ್ಲಿ ಕೇಕ್ ಕತ್ತರಿಸಿ ಹೊಸ ವಿವಾದಕ್ಕೆ ಕಾರಣರಾಗಿದ್ದರು.

ಇದೇ ವೇಳೆ ಹುಟ್ಟುಹಬ್ಬದ ದಿನದಂದು ತಡರಾತ್ರಿ ವರೆಗೆ ಲೌಡ್ ಸ್ಪೀಕರ್ ಉಪಯೋಗಿಸಿ ಅಕ್ಕಪಕ್ಕದವರಿಗೆ ತೊಂದರೆ ಹಾಗೂ ಅನುತಿಯಿಲ್ಲದೇ ರಸ್ತೆಯಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾರೆ ಎಂದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದ ಬಗ್ಗೆ ಕಾರಣ ಕೇಳಿ ಅದಾಗಲೇ ಪೊಲೀಸರು ವಿಜಯ್ ಗೆ ನೋಟೀಸ್ ಜಾರಿ ಮಾಡಿದ್ದರು.ತಲ