ಸಚಿವ ಬಿ.ಸಿ ನಾಗೇಶ್ ಮನೆ ಮುತ್ತಿಗೆಗೆ ಯತ್ನಿಸಿದ್ದ NSUI ಕಾರ್ಯಕರ್ತರ ವಿರುದ್ಧ ಎಫ್ ಐಆರ್: 15 ಮಂದಿ ಬಂಧನ.

ತುಮಕೂರು,ಜೂನ್,2,2022(www.justkannada.in): ನಿನ್ನೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ಧ  NSUI ಕಾರ್ಯಕರ್ತರ ವಿರುದ್ಧ ತುಮಕೂರು ಜಿಲ್ಲೆ ತಿಪಟೂರು ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಸಚಿವರ ಆಪ್ತ ಕಾರ್ಯದರ್ಶಿ ಮುರುಳೀಧರ್ ದೂರಿನನ್ವಯ ಎಫ್ ಐಆರ್ ದಾಖಲಾಗಿದೆ. ಒಟ್ಟು 20ಕ್ಕೂ ಹೆಚ್ಚು ಜನರ ಗುಂಪು  ಮುತ್ತಿಗೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ 15 ಮಂದಿ ಎನ್ ಎಸ್ ಯುಐ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಸೈಯದ್, ಸುಪ್ರೀತ್, ಅಮೃತ್ ಕುಮಾರ್, ಸಂಪತ್, ಮನು, ಹೇಮಂತ್ ನಾಗರಾಜ್ ಸೇರಿ 15 ಮಂದಿ ಅರೆಸ್ಟ್ ಆಗಿದ್ದಾರೆ.

Key words: FIR-against-NSUI-activists – minister -BC Nagesh’s –home-protest