“ಫೆ.13ರಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಕೃತಿಗಳ ಲೋಕಾರ್ಪಣೆ

kannada t-shirts

ಮೈಸೂರು,ಫೆಬ್ರವರಿ,10,2021(www.justkannada.in) : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಂತನ ಚಿತ್ತಾರ ಪ್ರಕಾಶನದ ವತಿಯಿಂದ ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಅವರ “ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು” ಹಾಗೂ “ಮೈಸೂರು ದಿ ಟೂರಿಸ್ಟ್ಯ್ ಪ್ಯಾರಡೈಸ್”(ಅನುವಾದಕರು-ಡಾ.ಆರ್.ನಾಗಭೂಷಣ) ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆಬ್ರವರಿ 13ರಂದು ಆಯೋಜಿಸಲಾಗಿದೆ.jkಕಲಾಮಂದಿರದಲ್ಲಿ ಅಂದು ಸಂಜೆ 4ಗಂಟೆಗೆ ಕೃತಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆಗೊಳಿಸಲಿದ್ದು, ಮುಖ್ಯ ಅಥಿತಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ ಆಗಮಿಸಲಿದ್ದಾರೆ.

February 13-journalist-Anshi Prasanna Kumar-books-Release

ಕೃತಿ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ನಂದೀಶ್ ಹಂಚೆ ಮಾತನಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.  ಸಂಜೆ 4ರಿಂದ ಅಮ್ಮರಾಮಚಂದ್ರ, ಮರಿಸ್ವಾಮಿ ಮತ್ತು ತಂಡದವರಿಗೆ ಗೀತಗಾಯನ ಆಯೋಜಿಸಲಾಗಿದೆ.

key words :  February 13-journalist-Anshi Prasanna Kumar-books-Release

website developers in mysore