ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

ಮೈಸೂರು,ನವೆಂಬರ್,04,2020(www.justkannada.in) : ಹಸು ತೊಳೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ರೈತ ಮೃತಪಟ್ಟಿದ್ದಾನೆ.

jk-logo-justkannada-logo

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತುಂಬುನೇರಳೆ ಗ್ರಾಮದ ಸೀರನಕಟ್ಟೆ ಕೆರೆಯಲ್ಲಿ ಈ ಘಟನೆ ಜರುಗಿದೆ.

ರೈತ ನಾಗರಾಜು (38) ಮೃತ ದುರ್ದೈವಿ. ಕೆರೆಯಲ್ಲಿ ಮೃತದೇಹಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಬಿಳಿಗೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.Farmer-dies-foot-falls-lake

key words : Farmer-dies-foot-falls-lake