ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಸ್ತಂಭ ಸ್ಥಾಪನೆ : ಪೊಲೀಸರು ಮತ್ತು ಕನ್ನಡ ಪರ ಸಂಘಟನೆಗಳ ನಡುವೆ ವಾಗ್ವಾದ…

ಬೆಳಗಾವಿ,ಡಿಸೆಂಬರ್,28,2020(www.justkannada.in): ಬೆಳಗಾವಿ ಮಹಾನಗರ ಪಾಲಿಕೆ ಎದುರು  ಕನ್ನಡ ಸಂಘಟನೆಗಳ ಹೋರಾಟಗಾರರು ಕನ್ನಡ ಧ್ವಜ ನೆಡಲು ಮುಂದಾಗಿದ್ದು,  ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ವಾಗ್ವಾದ ನಡೆದಿದೆ.

ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಧ್ವಜ ಸ್ತಂಭ ಹತ್ತಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ಹಿಂದೆ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಬೇಕೆಂಬ ಬೇಡಿಕೆ ಇತ್ತು. ಈಗ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ನನಸು ಮಾಡಿದ್ದಾರೆ.

ಕನ್ನಡದ ಜಯಘೋಷಗಳೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಆಗಮಿಸಿ ಧ್ವಜ ಕಂಬದ ಸಮೇತ ಪಾಲಿಕೆ ಮುಖ್ಯದ್ವಾರದ ಬಳಿ ಕನ್ನಡ ಧ್ವಜಸ್ತಂಭವನ್ನ ವನ್ನು ನೆಟ್ಟಿದ್ದಾರೆ. ಈ ವೇಳೆ ಪೊಲೀಸರು  ಯಾರು ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿ ತಡೆಯಲು ಯತ್ನಿಸಿದರು ಈ ವೇಳೆಕನ್ನಡ ಹೋರಾಟಗಾರರು ಧ್ವಜ ಹಾರಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಇಬ್ಬರು ಡಿಸಿಪಿಗಳು ಭೇಟಿ ನೀಡಿ ಹೋರಾಟಗಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಬಗ್ಗದ ಕನ್ನಡಪರ ಹೋರಾಟಗಾರರು ಧ್ವಜಸ್ತಂಭಕ್ಕೆ ಹಗ್ಗ ಕಟ್ಟಿ ಅಣುಕು ನೇನು ಹಾಕಿಕೊಳ್ಳುವ ರೀತಿ ಆಕ್ರೋಶ ವ್ಯಕ್ತಪಡಿಸಿದರು.   ನಾವು ಸತ್ತರೂ ಸರಿ ಪರವಾಗಿಲ್ಲ ಇಲ್ಲಿಂದ ಕದಲಲ್ಲ ಎಂದು ಕಿಡಿಕಾರಿದರು.

Key words: Establishment – Kannada flag- pillar -opposite –Belgaum-altercation- between- police -Kannada organizations.