ಮುಂದಿನ ಐದು ದಿನ ಕಂಠೀರವ ಸ್ಟೂಡಿಯೋಗೆ ಪ್ರವೇಶ ನಿರ್ಬಂಧ, 144 ಸೆಕ್ಸನ್ ಜಾರಿ

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಇನ್ನು ಐದು ದಿನ ಕಂಠೀರವ ಸ್ಟೂಡಿಯೋಗೆ ಪ್ರವೇಶ ನಿರ್ಬಂಧ ವಿಧಿಸಿ ಸರಕಾರ ಆದೇಶ ಹೊರಡಿಸಿದೆ.

ಮೂರು ದಿನದ ಬಳಿಕ ಅಪ್ಪು ಕುಟುಂಬದಿಂದ ಹಾಲು-ತುಪ್ಪ ಬಿಡುವ ಕಾರ್ಯ ನಡೆಯಲಿದೆ.
ಕಂಠೀರವ ಸ್ಟೂಡಿಯೋಗೆ ಸುತ್ತಮುತ್ತ 144 ಸೆಕ್ಸನ್ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಹೀಗಾಗಿ ಈ ವ್ಯಾಪ್ತಿಯಲ್ಲಿ ನಿರ್ಬಂಧ ಜಾರಿಯಲ್ಲಿರಲಿದೆ. ಈ ಸಂಬಂಧ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳು ಜಮಾಯಿಸುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.