ಬುಧವಾರ ನೂತನ ಸ್ಪೀಕರ್ ನೇಮಕಕ್ಕೆ ಚುನಾವಣೆ: ವಿಧಾನಸಭೆ ಕಲಾಪ ಮುಂದೂಡಿಕೆ…

ಬೆಂಗಳೂರು,ಜು,29,2019(www.justkannada.in):  ಸಮ್ಮಿಶ್ರ ಸರ್ಕಾರ ಪತನವಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಬುಧವಾರ ನೂತನ ಸ್ಪೀಕರ್ ನೇಮಕ ಚುನಾವಣೆ ನಡೆಯಲಿದೆ.

ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಡೆಪ್ಯೂಟಿ ಸ್ಪೀಕರ್ ಈ ಬಗ್ಗೆ ಘೋಷಣೆ ಮಾಡಿದರು.  ಜುಲೈ 31 ರಂದು ನೂತನ ಸ್ಪೀಕರ್ ನೇಮಕಕ್ಕೆ ಚುನಾವಣೆ ನಡೆಸಲಾಗುವುದು. ನಾಳೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ವಿಧಾನಸಭೆ ಸಚಿವಾಲಯ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಬಹುದು ಎಂದು ಹೇಳಿ ವಿಧಾನಸಭೆ ಕಲಾಪವನ್ನ ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ಸಮ್ಮಿಶ್ರ ಸರ್ಕಾರ ಪತನವಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಇಂದು  ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದರು. ಇನ್ನು ವಿಶ್ವಾಸಮತಯಾಚನೆ ಬಳಿಕ  ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ ನೀಡಿದರು.

Key words: Election – new speaker – Wednesday-Adjournment –legislative Assembly