ಜನವರಿಯಿಂದ ಪಕ್ಷಾಂತರ ಪರ್ವ ಆರಂಭ- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ.

kannada t-shirts

ಬೆಳಗಾವಿ,ಜುಲೈ,9,2022(www.justkannada.in): ಉತ್ತರ ಕರ್ನಾಟಕದ ಪ್ರಭಾವಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,  ಜನವರಿಯಿಂದ ಎಲ್ಲಾ ಪಕ್ಷಗಳಲ್ಲೂ ಪಕ್ಷಾಂತರ ಪರ್ವ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

2023ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, ಜನವರಿಯಿಂದ ಪಕ್ಷಾಂತರ ಪರ್ವ ಆರಂಭವಾಗಲಿದೆ. ರಾಜಕೀಯ ಅಂದ್ರೆ ಹೀಗೆ ಅಂತ ಹೇಳಲು ಆಗಲ್ಲ. ಇದೆಲ್ಲಾ ಆನ್ ಲೈನ್ ಬುಕ್ಕಿಂಗ್ ಇದ್ದ ಹಾಗೆ. ಯಾವಾಗ ಬೇಕಾದರೂ ಬುಕ್ ಮಾಡಬಹುದು. ಯಾವಾಗ ಬೇಕಾದರೇ ಕ್ಯಾನ್ಸಲ್ ಮಾಡಬಹುದು ಎಂದರು.siddaramaiah-dk-shiva-kumar-race-cm-position-kpcc-sathish-jarakiholi

ಇನ್ನು ಜನವರಿ, ಫೆಬ್ರವರಿಗೆ ಕಾಂಗ್ರೆಸ್ ಪ್ರಣಾಳಿಕೆ ಫೈನಲ್ ಆಗಲಿದೆ.  ಮಳೆಗಾಲ ನಿಂತ ಮೇಲೆ ಎಲ್ಲಾ ಲೆಕ್ಕಾಚಾರ ಶುರುವಾಗಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: election- defection- starts- January-KPCC- Working President -Satish Jarakiholi.

website developers in mysore