ಭೂಮಿ ಕಂಪಿಸಿದ ಅನುಭವ: ಭಯದಿಂದ ಮನೆಯಿಂದ ಹೊರಗೆ ಓಡಿ ಬಂದ ಜನರು….

kannada t-shirts

ವಿಜಯಪುರ,ಡಿಸೆಂಬರ್,3,2020(www.justkannada.in):  ವಿಜಯಪುರ ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಭಯದಿಂದ ಮನೆಯಿಂದ ಹೊರಗಡೆ ಓಡಿ ಬಂದಿರುವ ಘಟನೆ ನಡೆದಿದೆ.logo-justkannada-mysore

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ  ಮನಗೊಳಿ, ಉಕ್ಕಲಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.  ಈ ವೇಳೆ ಗ್ರಾಮಗಳಲ್ಲಿನ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಮನೆಗಳ ಮೇಲ್ಚಾವಣಿ ಮಣ್ಣು ಉದುರಿದೆ ಎಂದು ಹೇಳಲಾಗುತ್ತಿದೆ.Earthquake-vijayapur-village-fear

ಇನ್ನು ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಗ್ರಾಮದಲ್ಲಿನ ಜನರು ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

Key words:  Earthquake-vijayapur-village-fear

website developers in mysore