ಕೆಎಸ್ ಒಯು ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮತ್ತೆ ಒಂದು ವರ್ಷ ಮುಂದುವರಿಕೆ.

kannada t-shirts

ಬೆಂಗಳೂರು,ಮೇ,18,2022(www.justkannada.in):   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಡಾ. ವಿದ್ಯಾಶಂಕರ್ ಮತ್ತೆ ಒಂದು ವರ್ಷಗಳ ಕಾಲ ಮುಂದುವರೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶಿಸಿದ್ದಾರೆ.

ಕೆಎಸ್ ಒಯು ಕುಲಪತಿಯಾಗಿ ಡಾ. ವಿದ್ಯಾಶಂಕರ್ ಅವರ ಅವಧಿ 29-5-2022ಕ್ಕೆ ಮುಕ್ತಾಯವಾಗುತ್ತಿತ್ತು. ಇದೀಗ ಮತ್ತೆ ಒಂದು ವರ್ಷಗಳ ಕಾಲ ಕುಲಪತಿಯಾಗಿ ಡಾ ವಿದ್ಯಾಶಂಕರ್ ಅವರನ್ನ ಮುಂದುವರೆಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

30-5-2022 ರಿಂದ ಒಂದು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ  ಡಾ.ವಿದ್ಯಾಶಂಕರ್ ಕೆ.ಎಸ್ ಒಯು ಕುಲಪತಿಯಾಗಿ ಮುಂದುವರೆಯಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Key words: Dr. Vidyashankar –KSOU-VC- one year-order

 

website developers in mysore