ಕೊರೊನಾ ನಿಯಂತ್ರಣಕ್ಕೆ ಮೂರು ಮಂತ್ರ ಹೇಳಿದ ಸುಧಾಕರ್! ಇಲ್ಲದಿದ್ದರೆ ಈ ಬಾರಿ ತಪ್ಪು ನಮ್ದೆ ಎಂದ ಹೆಲ್ತ್ ಮಿನಿಸ್ಟರ್

ಬೆಂಗಳೂರು, ಏಪ್ರಿಲ್ 13, 2021 (www.justkannada.in): ಕೊರೊನಾ ನಿಯಂತ್ರಣಕ್ಕೆ ಮೂರು ತಂತ್ರ-ಮಂತ್ರಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಆ ಮೂರು ಮಂತ್ರಗಳೆಂದರೆ 1.ಮಾಸ್ಕ್, 2. ಭೌತಿಕ ಅಂತರ 3. ಕೈಗಳ ಸ್ವಚ್ಛತೆ

ಈ ಮೂರು ಮಂತ್ರಗಳನ್ನು ಜಪಿಸದೇ ಕೊರೊನಾ ಸೋಂಕಿಗೆ ತುತ್ತಾದರೆ ಈ ಬಾರಿ ತಪ್ಪು ನಮ್ದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇಲಿನ ಮೂರೂ ನಿಯಮಗಳನ್ನು ಪಾಲಿಸಿದರೆ ಕೊರೊನಾ ವಿರುದ್ಧ ಜಯ ನಮ್ದೆ. ನಿರ್ಲಕ್ಷ್ಯ ಮಾಡಿದರೆ ತಪ್ ನಮ್ದೆ. ಶಿಸ್ತು, ಸಂಯಮ, ಸ್ವಯಂ ನಿಯಂತ್ರಣ ಪಾಲಿಸೋಣ. ಕೊರೊನಾ ಎರಡನೇ ಅಲೆಯನ್ನು ಹಿಮ್ಮೆಟ್ಟಿಸೋಣ ಎಂದು ಸುಧಾಕರ್ ತಿಳಿಸಿದ್ದಾರೆ.