ಡಾ. ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ನಾಲಿಗೆ ಹರಿಬಿಟ್ಟು ಕ್ಷಮೆ ಕೋರಿದ ಶಾಸಕ ಎನ್.ಎ ಹ್ಯಾರಿಸ್…

kannada t-shirts

ಬೆಂಗಳೂರು,ಫೆಬ್ರವರಿ,17,2021(www.justkannada.in):  ನಟ ಸಾರ್ವಭೌಮ, ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ನಾಲಿಗೆ ಹರಿಬಿಟ್ಟಿದ್ದಾರೆ.jk

ಡಾ.ರಾಜ್‌ಕುಮಾರ್​ ಅವರ ಪ್ರತಿಮೆ ಸ್ಥಾಪನೆ ವಿಚಾರವಾಗಿ ಶಾಸಕ ಹ್ಯಾರಿಸ್ ಮಾತನಾಡಿದ್ದರೆನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು. ಅದರಲ್ಲಿ ಶಾಸಕ ಹ್ಯಾರಿಸ್ “ಪ್ರತಿಮೆಯನ್ನು ಸ್ಥಾಪಿಸಿದ್ದಾಗಿದೆ ಅದಕ್ಕೆ ರಕ್ಷಣೆ ಏಕೆ? ರಕ್ಷಣೆ ನೀಡೋದಾದರೆ ಅದನ್ನು ಮನೆಯಲ್ಲೇ ಇರಿಸಿಕೊಳ್ಳಬಹುದಲ್ಲ, ಹೊರಗೆ ಇಡೋದೇಕೆ? ಎಂದು ಹೇಳಿಕೆ ನೀಡಿದ್ದಾರೆ.

ಡಾ. ರಾಜ್ ಕುಮಾರ್ ಪ್ರತಿಮೆಯನ್ನ ಇಡೋದೆ ದೊಡ್ಡ ಕತೆ. ಅದ್ರಲ್ಲಿ  ಆಫೀಸ್ ಬೇರೆ ಮಾಡಿಕೊಡೋಕೆ ಆಗುತ್ತಾ..? ಪ್ರತಿಮೆಗೆ ಪ್ರೊಟೆಕ್ಷನ್ ಏನು ಬೇಕಾಗಿಲ್ಲ.  ಪ್ರೊಟೆಕ್ಷನ್ ಬೇಕು ಅಂದಿದ್ರೆ ಮನೆಯಲ್ಲೇ ಇಟ್ಟಿದ್ರೆ ಆಗುತ್ತಿತ್ತು.  ರೋಡಲ್ಲಿ ಯಾಕೆ ಇಡ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಶಾಸಕ ಹ್ಯಾರಿಸ್ ವಿವಾದಕ್ಕೆ ಗುರಿಯಾಗಿದ್ದಾರೆ.

dr-raja-kumar-statue-congress-mla-na-harris
ಕೃಪೆ-internet

 ಕ್ಷಮೆ ಕೋರಿಕೆ…

ನಾಲಿಗೆ ಹರಿ ಬಿಡುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ಷಮೆಕೋರಿ ಸ್ಪಷ್ಟನೆ ನೀಡಿರುವ ಶಾಸಕ ಎನ್.ಎ ಹ್ಯಾರಿಸ್,. ಡಾ.ರಾಜ್ ಕುಮಾರ್, ಅಂಬೇಡ್ಕರ್ ಫೋಟೊ ಕೂಡ ಇದೆ. ದೊಮ್ಮಲೂರಿನಲ್ಲಿ ಕೆಲಸ ನಡೆಯುತ್ತಿತ್ತು. ವೀಕ್ಷಿಸಲು ಹೋಗಿದ್ದವು. ಇಡೀ ಮಾನವ ಕುಲಕ್ಕೆ ಸಂದೇಶ ಕೊಡ್ತಾರೆ ಅಣ್ಣವ್ರು. ಅವರ ಪ್ರತಿಮೆ ಬಗ್ಗೆ ಹೇಳಿಕೆ ನೀಡಿಲ್ಲ. ಯಾರೋ ಬೇಕು ಅಂತಾ ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ. ವಿಡಿಯೋದಿಂದ ಅಭಿಮಾನಿಗಳಲ್ಲಿ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

Key words: Dr. Raja Kumar- Statue-congress MLA- NA Harris.

website developers in mysore