ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಾಟೆ ಕೇಸ್:  ಬಂಧಿತ ಸಂಪತ್ ರಾಜ್ ಪರ ಡಿ.ಕೆ ಶಿವಕುಮಾರ್ ಬ್ಯಾಟಿಂಗ್…

kannada t-shirts

ಬೆಂಗಳೂರು, ನವೆಂಬರ್,17,2020(www.justkannada.in): ಡಿ.ಜೆ ಹಳ್ಳಿ ಮತ್ತು ಕೆ.ಜಿಹಳ್ಳಿ ಗಲಾಟೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧಿತರಾಗಿರುವ  ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಪರ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ.kannada-journalist-media-fourth-estate-under-loss

ಸಂಪತ್ ರಾಜ್ ಬಂಧನ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ಸಂಪತ್ ರಾಜ್ ಎಲ್ಲಿಯೂ ಓಡಿ ಹೋಗಿರಲಿಲ್ಲ. ಅವರಿಗೆ ಆರೋಗ್ಯ ಸರಿ ಇರಲಿಲ್ಲ.  ಅವರು ಓಡಿ ಹೋಗಿದ್ರು ಅಂತಾ ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರನ್ನ ಮುಗಿಸುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ನಾಯಕರಿಂದ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.

ಸಂಪತ್ ರಾಜ್ ವಿರುದ್ಧ ಕಾಂಗ್ರೆಸ್ ಶಾಸಕ  ಅಖಂಡ ಶ್ರೀನಿವಾಸ ಮೂರ್ತಿ ದೂರು ನೀಡುವ ಕುರಿತು  ಮಾತನಾಡಿದ ಡಿ.ಕೆ ಶಿವಕುಮಾರ್, ವೈಯಕ್ತಿಕ ಹೇಳಿಕೆ ಮೇಲೆ ಕ್ರಮ ಕೈಗೊಳ್ಳಲು ಆಗಲ್ಲ. ಕೆಪಿಸಿಸಿ ಕಚೇರಿಗೆ ಅಥವಾ ನನ್ನ ಮನೆಗೆ ಬಂದು ಮಾತನಾಡಲಿ ಎಂದರು.

Key words: DJ halli- KJ halli –case-KPCC president-DK Shivakumar -batting – Sampath Raj

website developers in mysore