ಕೊರೋನಾ ಸಂದರ್ಭ ಯಶಸ್ವಿಯಾಗಿ ನಿಭಾಯಿಸುವೆ- ಮೈಸೂರು ನೂತನ ಡಿಸಿ ಬಿ.ಶರತ್ ವಿಶ್ವಾಸ..

ಮೈಸೂರು,ಆಗಸ್ಟ್,29,2020(www.justkannada.in) ; ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿ ಕೊರೊನಾ ಹಾಗೂ ಪ್ರವಾಹದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದೇನೆ ಎಂದು ಮೈಸೂರು ಜಿಲ್ಲೆ ನೂತನ ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.

jk-logo-justkannada-logo

ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಸಿ ಬಿ.ಶರತ್,  ಕೊರೊನಾ ವಿರುದ್ಧದ ಹೋರಾಟದ ಬಗ್ಗೆ ಅವಲೋಕನ ಮಾಡಿದ್ದು, ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡಲು ಎಲ್ಲಾ ಅಧಿಕಾರಿಗಳ ಸಹಕಾರ ಪಡೆದುಕೊಂಡಿದ್ದೇನೆ. ಕಲ್ಬುರ್ಗಿಯಲ್ಲಿ ಯಶಸ್ವಿಯಾಗಿ ಕೊರೊನಾ ಸಂದರ್ಭವನ್ನು ನಿರ್ವಹಿಸಿದ್ದೇನೆ. ಅದರ ಅನುಭವದ ಮೇಲೆ ಮೈಸೂರಿನಲ್ಲಿಯೂ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

key words ; District-Collector-B.Sharath-assured-successful-handling-flood-corona-information