ಮೈಸೂರು ಶ್ರೀ ರಾಮಕೃಷ್ಣ ಆಶ್ರಮ ವತಿಯಿಂದ ಸೆ.27ರಿಂದ ಉಚಿತ ಸಸಿಗಳ ವಿತರಣೆ ಕಾರ್ಯಕ್ರಮ…

ಮೈಸೂರು,ಸೆಪ್ಟಂಬರ್,24,2020(www.justkannada.in):  ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮವು ‘ಹಚ್ಚ ಹಸಿರ ಮೈಸೂರು’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನ ವಿತರಿಸಲು ಮುಂದಾಗಿದೆ.jk-logo-justkannada-logo

ಸೆಪ್ಟಂಬರ್ 27 ರಿಂದ ನವೆಂಬರ್ ತಿಂಗಳವರೆಗೆ ಸಾರ್ವಜನಿಕರಿಗೆ ಉಚಿತವಾಗಿ 25 ಸಾವಿರಕ್ಕಿಂತಲೂ ಹೆಚ್ಚು ಸಸಿಗಳನ್ನ ವಿತರಲಿಸುವ ಕಾರ್ಯಕ್ರಮ ಆಯೋಜಿಸಿದೆ. ಪ್ರತಿದಿನ ಬೆಳಿಗ್ಗೆ 10ರಿಂದ 12 ಗಂಟೆ ಹಾಗೆಯೇ  ಮಧ್ಯಾಹ್ನ 3 ರಿಂದ 5.30ರವರೆಗೆ ಸಸಿಗಳನ್ನ ವಿತರಿಸಲಾಗುತ್ತದೆ. ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮ, ಶ್ರೀರಾಮಕೃಷ್ಣ ವಿದ್ಯಾಶಾಲಾ, ವಿವೇಕಸ್ಮಾರಕ ನಾರಾಯಣಶಾಸ್ತ್ರಿ ರಸ್ತೆ ಮೈಸೂರು, ರಾಮಕೃಷ್ಣ ವಿದ್ಯಾಕೇಂದ್ರ ರಾಮಕೃಷ್ಣ ನಗರ ಮೈಸೂರು ಇಲ್ಲಿ ಸಸಿಗಳನ್ನ ಪಡೆಯಬಹುದಾಗಿದೆ.distribution-free-saplings-mysore-sri-ramakrishna-ashram-sep-27

ಹಾಗೆಯೇ ಹಚ್ಚ ಹಸಿರ ಮೈಸೂರು ಕಾರ್ಯಕ್ರಮದಲ್ಲಿ ವಿವೇಕಪ್ರಭೆಯ ಮೈಸೂರು ಅಡಿಯಲ್ಲಿ ವಿವೇಕ ಪ್ರಭಾ ಮಾಸಪತ್ರಿಕೆ ವಿತರಿಸಲಾಗುತ್ತದೆ.  ಶ್ರೀರಾಮಕೃಷ್ಣರ, ಶ್ರೀಶಾರಾದದೇವಿಯವರ ಮತ್ತು ಸ್ವಾಮಿ ವಿವೇಕನಂದರ ಜೀವನ ಸಂದೇಶವನ್ನೊಳಗೊಂಡ ಸ್ಪೂರ್ತಿ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಸ್ವಾಮಿ ಮುಕ್ತಿದಾನಂದ ಅವರು ತಿಳಿಸಿದ್ದಾರೆ.

Key words: Distribution – free – Saplings – Mysore -Sri Ramakrishna Ashram- Sep.27.