ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಸ್ನೇಹಿತನನ್ನೇ ಹತ್ಯೆಗೈದ…

ಬೆಂಗಳೂರು, ಮೇ,28,2019(www.justkannada.in):  ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಸ್ನೇಹಿತನನ್ನೇ ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ  ಪಟ್ಟೆಗಾರಪಾಳ್ಯದಲ್ಲಿ ಈ ಘಟನೆ ನಡೆದಿದೆ. ರಾಬಿನ್ ಕೊಲೆಯಾದ ವ್ಯಕ್ತಿ ತನ್ವಿರ್ ಖಾನ್ ಎಂಬಾತನೇ ಹತ್ಯೆಗೈದ ಆರೋಪಿ. ತನ್ವೀರ್ ಖಾನ್ ತನ್ನ ಸ್ನೇಹಿತ ರಾಬಿನ್ ಪತ್ನಿ ಮೇಲೆ ಕಣ್ಣುಹಾಕಿ ಅಕ್ರಮ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಈ ನಡುವೆ ಅಕ್ರಮ ಸಂಬಂಧಕ್ಕೆ ಸ್ನೇಹಿತ ರಾಬಿನ್ ಅಡ್ಡಿಯಾಗುತ್ತಾನೆಂದು ಕಲ್ಲು ಎತ್ತಿಹಾಕಿ ತನ್ವೀರ್ ಖಾನ್ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣಾ ಪೊಲೀಸರು ಆರೋಪಿ ತನ್ವೀರ್ ಖಾನ್ ನನ್ನ ಬಂಧಿಸಿದ್ದಾರೆ.

Key words: Disruption of the immoral relationship:He killed his friend

#Bangalore #crimenews #kill #friend