ದಿನೇಶ್ ಗುಂಡೂರಾವ್ ಅಯೋಗ್ಯ: ಸಿದ್ಧರಾಮಯ್ಯನ ಚೇಲ ಎಂದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್…

kannada t-shirts

ಹಾವೇರಿ,ನ,30,2019(www.justkannada.in):  ದಿನೇಶ್ ಗುಂಡೂರಾವ್ ಓರ್ವ ಅಯೋಗ್ಯ. ಮಾಜಿ ಸಿಎಂ ಸಿದ್ಧರಾಮಯ್ಯನ ಚೇಲಾ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.

ಹಿರೇಕೆರೂರಿನಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ಬಿ.ಸಿ ಪಾಟೀಲ್, ಸಿದ್ಧರಾಮಯ್ಯ ದಿನೇಶ್ ಗುಂಡೂರಾವ್ ಇಬ್ಬರು ಸೇರಿ ಕಾಂಗ್ರೆಸ್ ಮುಗಿಸುತ್ತಿದ್ದಾರೆ. ಈ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿಲ್ಲ. ದುಡ್ಡು ತೆಗೆದುಕೊಂಡು ವೋಟು ಹಾಕಿ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ, ಇದು ಅಪರಾಧ ಅಲ್ವೇ ಎಂದು ಆರೋಪಿಸಿದರು.

ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರಚಾರಕ್ಕೆ ಬರ್ತಿದ್ದಾರೆ.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹ ಬರಲಿ. ನಮ್ಮ ಕ್ಷೇತ್ರದಲ್ಲಿ ಎಲ್ಲರೂ ಮೋದಿಗಳೇ ಎಂದು ಬಿ.ಸಿ ಪಾಟೀಲ್ ಕಾಂಗ್ರೆಸ್ ಗೆ ಟಾಂಗ್ ನೀಡಿದರು.

Key words: Dinesh Gundurao-  Siddaramaiah- Chela –haveri- BJP candidate -BC Patil

website developers in mysore